ನಟ ದರ್ಶನ್ ಮತ್ತು ಯಶ್ ಬಗ್ಗೆ ಸನ್ನಿ ಲಿಯೋನ್ ಮಾತನಾಡಿದ್ದಾರೆ.

 

ಬಾಲಿವುಡ್‌ನಲ್ಲಿ ಮಿಂಚಿದ ನಟಿ ಸನ್ನಿ ಲಿಯೋನ್, ಕನ್ನಡ ಸಿನಿಮಾ ರಂಗದಲ್ಲೂ ಕೂಡ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಕನ್ನಡ ಸಿನಿಮಾದ ಐಟಂ ಹಾಡುಗಳಲ್ಲಿ ಹೆಜ್ಜೆ ಹಾಕಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಕೇವಲ ಕನ್ನಡದಲ್ಲಿ ಅಭಿನಯಿಸುವುದು ಮಾತ್ರವಲ್ಲ ಸನ್ನಿ ಲಿಯೋನ್ ಕನ್ನಡ ಚಿತ್ರರಂಗದ ಬಗ್ಗೆ ಒಂದಷ್ಟು ತಿಳಿದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ನಟ ದರ್ಶನ್ ಮತ್ತು ಯಶ್ ಬಗ್ಗೆ ಸನ್ನಿ ಲಿಯೋನ್ ಮಾತನಾಡಿದ್ದಾರೆ. ನಿರೂಪಕಿ ಅನುಶ್ರೀ ನಡೆಸಿಕೊಟ್ಟಿರುವ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ದರ್ಶನ್ ಮತ್ತು ಯಶ್ ಕುರಿತಾಗಿ ಮಾತನಾಡಿದ್ದಾರೆ. ಈ ಸಂದರ್ಶನದ ಸಣ್ಣದೊಂದು ಪ್ರೋಮೊ ಹರಿಬಿಟ್ಟಿದ್ದಾರೆ ಅನುಶ್ರೀ.

ರಾಕಿ ಭಾಯ್ ಮತ್ತು ದರ್ಶನ್ ಬಗ್ಗೆ ಮಾತನಾಡಿರುವ ಸನ್ನಿ ಲಿಯೋನ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟಕ್ಕೂ ದರ್ಶನ್ ಬಗ್ಗೆ ಸನ್ನಿ ಲಿಯೋನ್ ಏನಂದ್ರು? ಯಶ್ ಫೋಟೊ ನೋಡಿ ಸನ್ನಿ ಲಿಯೋನಿ ಹೀಗೆ ಅಂದಿದ್ದು ಯಾಕೆ? ಅನ್ನೋದನ್ನ ಮುಂದೆ ಓದಿ…

ಅನುಶ್ರೀ ಶೋನಲ್ಲಿ ‘ಚಾಂಪಿಯನ್’ ತಂಡ!
ನಿರೂಪಕಿ ಅನುಶ್ರೀ ತಮ್ಮ ಯುಟ್ಯೂಬ್ ಚಾನಲ್‌ನಲ್ಲಿ ಹಲವು ಸಿನಿಮಾಗಳ ಸಂದರ್ಶನವನ್ನು ಮಾಡುತ್ತಾರೆ. ನಾನಾ ಸೆಲೆಬ್ರಿಟಿಗಳು ಮತ್ತು ಸಿನಿಮಾ ತಂಡಗಳು ಅನುಶ್ರೀ ಸಂದರ್ಶನದಲ್ಲಿ ಕಾಣಿಸಿಕೊಳ್ಳುತ್ತವೆ. ಅಂತೆಯೇ ಈಗ ಕನ್ನಡದ ಸಿನಿಮಾ ‘ಚಾಂಪಿಯನ್’ ತಂಡ ಕೂಡ ಅನುಶ್ರೀ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಕಾಣಿಸಿಕೊಂಡಿದೆ. ಚಿತ್ರದ ನಿರ್ಮಾಪಕ, ನಟ ಮತ್ತು ಸನ್ನಿ ಲಿಯೋನ್ ಈ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ.

ಸಚಿನ್ ನಾಯಕನಾಗಲು ದರ್ಶನ್ ಸ್ಪೂರ್ತಿ!

ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಸಚಿನ್‌ಗೆ ಅನುಶ್ರೀ ಪ್ರಶ್ನೆಯೊಂದನ್ನು ಕೇಳ್ತಾರೆ. ನಿಮಗೆ ಸಿನಿಮಾ ಮಾಡಲು ಯಾರು ಸ್ಪೂರ್ತಿ ಎಂದು ಅನುಶ್ರೀ ಪ್ರಶ್ನೆ ಮಾಡುತ್ತಾರೆ. ಈ ಪ್ರಶ್ನೆಗೆ ಉತ್ತರ ಕೊಟ್ಟ ಸಚಿನ್ ಡಿಬಾಸ್ ನನಗೆ ಸ್ಪೂರ್ತಿ ಎನ್ನುತ್ತಾರೆ. ಜೊತೆಗೆ ಅವರ ಗತ್ತು ತುಂಬಾ ಇಷ್ಟ ಎಂದಿದ್ದಾರೆ. “ಸಚಿನ್ ನಾನು ಮೊದಲು ಸಿನಿಮಾ ಮಾಡುವಾಗ ಇದೇ ರೀತಿ ಇದ್ದೆ. ಹಿಂಜರಿಕೆ ಬೇಡ ನಿಮ್ಮ ಬೆಂಬಲಕ್ಕೆ ನಾನಿದ್ದೇನೆ” ಎಂದು ಹೇಳಿದರಂತೆ ನಟ ದರ್ಶನ್. ದರ್ಶನ್ ಬಗ್ಗೆ ಈ ರೀತಿಯ ಮಾತುಗಳನ್ನು ಹೇಳುತ್ತಾ ತನಗೆ ಸಿನಿಮಾ ಮಾಡಲು ಸ್ಫೂರ್ತಿಯಾಗಿದ್ದು ಹೇಗೆ ಎನ್ನುವುದನ್ನು ಮಾತನಾಡಿದ್ದಾರೆ. ಜೊತೆಗೆ ಸನ್ನಿ ಲಿಯೋನ್ ಕೂಡ ಮಾತನಾಡಿದ್ದಾರೆ.

ದರ್ಶನ್, ಯಶ್ ಬಗ್ಗೆ ಸನ್ನಿ ಹೇಳಿದ್ದೇನು?

ಸಂದರ್ಶನದಲ್ಲಿ ಸನ್ನಿ ಲಿಯೋನ್ ದರ್ಶನ್ ಎಂದರೆ ತುಂಬಾನೇ ಇಷ್ಟ ಎಂದು ಹೇಳಿಕೊಂಡಿದ್ದಾರೆ. ನಟ ದರ್ಶನ್ ಬಗ್ಗೆ ಸನ್ನಿ ಲಿಯೋನ್ ಹೇಳಿದ್ದು ಹೀಗೆ “ಅವರು ತುಂಬಾ ಒಳ್ಳೆಯವರು. ಅವರು ಅಂದ್ರೆ ಇಷ್ಟ”. ಎಂದ ಸನ್ನಿ ಲಿಯೋನ್ ರಾಕಿಭಾಯ್ ಫೋಟೋ ನೋಡಿ ಕಾಮೆಂಟ್ ಮಾಡಿದ್ದಾರೆ. ಅನುಶ್ರೀ ಯಶ್ ಅವರ ಕೆಜಿಎಫ್ ಪೋಸ್ಟರನ್ನು ತೋರಿದಾಗ. ‘ಇದು ರಾಕಿ ಭಾಯ್’ ಅಂತಾರೆ. ಜೊತೆಗೆ ಅವರನ್ನು ನೋಡಿ “ಅವರು ನನ್ನ ಹುಡುಗ ಅಲ್ಲ” ಅಂತ ಹೇಳಿ ನಗುತ್ತಾರೆ. ಈ ಮೂಲಕ ಸನ್ನಿ ಲಿಯೋನ್ ಕನ್ನಡ ಸಿನಿಮಾ ರಂಗದ ಮೇಲೆ ತಮಗಿರುವ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪುನೀತ್ ಸರಳ ಸಜ್ಜನಿಕೆಯ ನಡತೆಯನ್ನು ನಟಿ ಸಾಯಿ ಪಲ್ಲವಿ ಕೊಂಡಾಡಿದ್ದಾರೆ.!

Tue Jul 5 , 2022
  ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂತಹ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು ಎನ್ನುವುದನ್ನು ಹಲವರು ಹೇಳುತ್ತಾರೆ. ಇನ್ನು ಪುನೀತ್ ರಾಜ್‌ಕುಮಾರ್ ಅವರನ್ನು ಹತ್ತಿರದಿಂದ ಬಲ್ಲವರು ಅಪ್ಪು ಸರಳತೆಯ ಬಗ್ಗೆ ಹಾಡಿ ಹೊಗಳುತ್ತಾರೆ. ನಟ ಪುನೀತ್ ರಾಜಕುಮಾರ್ ದೈಹಿಕವಾಗಿ ಅಷ್ಟೇ ಎಲ್ಲರನ್ನು ಬಿಟ್ಟು ಹೋಗಿದ್ದಾರೆ. ಆದರೆ ಅವರನ್ನು ಪ್ರೀತಿಸುವ, ಇಷ್ಟಪಡುವ ಜನರ ಮನದಲ್ಲಿ ಪುನೀತ್ ರಾಜಕುಮಾರ್ ಅಮರವಾಗಿದ್ದಾರೆ . ಈಗ ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡು […]

Advertisement

Wordpress Social Share Plugin powered by Ultimatelysocial