ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಶಕ್ತಿಧಾಮ ಎಲ್ಲರ ಗಮನವನ್ನು ಸೆಳೆದಿದೆ ಹಾಗೂ ಹೆಚ್ಚಿನ ಮನೆಮಾತಾದ ವಿಷಯವಾಗಿದೆ, ಇದರ ವಿಶೇಷತೆ ಎಂದರೆ ಕನ್ನಡ ಚಿತ್ರರಂಗದಲ್ಲಿಯೇ ಚಿಕ್ಕ ವಯಸ್ಸಿನಿಂದ ತಮ್ಮ ಕಲೆಯನ್ನು ವ್ಯಕ್ತಪಡಿಸಿಕೊಂಡು,ಅಭಿನಯದ ಛಾಪನ್ನು ಮೂಡಿಸಿದಂತಹ ಹೆಸರಾಂತ ಕಲಾವಿದ ಪುನೀತ್ ರಾಜ್ಕುಮಾರ್. ಇವರು ಹುಟ್ಟಿನಿಂದಲೇ ತಮ್ಮ ಹೆಸರಿನ ಜೊತೆಗೆ ತಮ್ಮ ಸರಳತೆಯಿಂದಲೇ ಹೆಚ್ಚಾಗಿ ಕನ್ನಡಿಗರ ಮನೆ ಮನಸ್ಸನ್ನು ಗೆದಿದ್ದರು.ಆದರೆ ಅವರ ಶಕ್ತಿಧಾಮ ಎಂಬುದು ಕೌಟುಂಬಿಕ ಹಿನ್ನೆಲೆಯನ್ನು ಕಳೆದುಕೊಂಡ ಹೆಣ್ಣುಮಕ್ಕಳಿಗೆ ಇಲ್ಲಿ ಆಶ್ರಯದ ಜೊತೆಗೆ ಉನ್ನತವಾದ ಶಿಕ್ಷಣವನ್ನು ಪೂರೈಸಲು ಸಾಥ್ ಕೊಡುತ್ತಿದೆ ಈ ಶಕ್ತಿಧಾಮ 2015 ರಿಂದ ಸುಮಾರು 160 ಹೆಣ್ಣುಮಕ್ಕಳು ಇಲ್ಲಿ ಅಶ್ರಯವನ್ನು ಪಡೆದುಕೊಳ್ಳತ್ತಿದ್ದಾರೆ ವಿಶೇಷವೆಂದರೆ ಮಧ್ಯಪ್ರದೇಶ,ಗುಲ್ಬರ್ಗಾ ಮತ್ತು ರಾಯಚೂರು ಮುಂತಾದ ಕಡೆಯಿಂದ ಬಂದಂತಹ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ವಿಶೇಷವಾಗಿದೆ,ಇದೇ ರೀತಿಯಾದ ಕೌಟುಂಬಿಕ ಹಿನ್ನೆಲೆಯನ್ನು ಕಳೆದುಕೊಂಡ ಹೆಣ್ಣುಮಕ್ಕಳಿಗೆ ಶಕ್ತಿಯನ್ನು ತುಂಬುತ್ತಾ ವಿದ್ಯೆಯನ್ನು ಹರಿಸುವ ಧಾಮವಾಗಿ ತನ್ನ ಸ್ಧಾನಕ್ಕೇ ಸ್ಫೂರ್ತಿಯಾಗಿದೆ ಶಕ್ತಿಧಾಮ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada