ಸಾಲ ಹಿಂದಿರುಗಿಸಲು ಸಾಧ್ಯವಾಗದೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ !

ಸುರತ್ಕಲ್‌: ಸ್ನೇಹಿತರಿಂದ ಪಡೆದಿದ್ದ ಸಾಲ ಹಿಂದಿರುಗಿಸಲು ಸಾಧ್ಯವಾಗದೆ ಯುವಕನೋರ್ವ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುರತ್ಕಲ್‌ ಮಲ್ಲಮಾರ್‌ ಬೀಚ್‌ನಲ್ಲಿ ಸೋಮವಾರ ನಡೆದಿದೆ.

ಕಾಟಿಪಳ್ಳ ನಿವಾಸಿ ಕ್ಯಾಂಡ್ರಿಕ್‌ ಲಾರೆನ್ಸ್‌ ಡಿ’ಸೋಜಾ (20) ಮೃತ ಯುವಕ.

ಕೆಲಸದಿಂದ ರಜೆ ಪಡೆದಿದ್ದ ಅವರು ಸೋಮವಾರ ಬೆಳಗ್ಗೆ 11.30ಕ್ಕೆ ಮನೆ ಬಿಟ್ಟು ತೆರಳಿದ್ದು, ತಾಯಿ ಹುಡುಕಾಟ ನಡೆಸಿದಾಗ ಡೆತ್‌ನೋಟ್‌ ಪತ್ತೆಯಾಗಿತ್ತು. ತತ್‌ಕ್ಷಣ ಹುಡುಕಾಡಿದರೂ ಪತ್ತೆಯಾಗಲಿಲ್ಲ. 3 ಗಂಟೆಯ ಹೊತ್ತಿಗೆ ಅವರ ಮೃತದೇಹ ಸುರತ್ಕಲ್‌ ಬೀಚ್‌ ಬಳಿ ಕಂಡುಬಂದಿದೆ.

ಸ್ನೇಹಿತರಿಗೆ, ಅಮ್ಮನಿಂದ ಚಿನ್ನ ಪಡೆದು ಅಡವಿರಿಸಿ ಸಾಲ ಪಡೆದಿದ್ದು, ಹಿಂದಿರುಗಿಸಲು ಸಾಧ್ಯವಾಗುತ್ತಿಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆಯಲಾಗಿದೆ. ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತುಟಿಗಳಿಗೆ ತಿಳಿ ಗುಲಾಬಿ ಬಣ್ಣವನ್ನು ನೀಡುತ್ತದೆ.

Tue Apr 12 , 2022
  ತುಟಿಗಳು ಒಣಗಿದ್ದು, ನಿರ್ಜೀವವಾಗಿ ಕಂಡು ಬರುವ ಸಮಸ್ಯೆ ಬಹಳಷ್ಟು ಜನರನ್ನು ಕಾಡುತ್ತಿರುತ್ತದೆ. ಇದನ್ನು ದೂರ ಮಾಡಲು ಲಿಪ್ ಸ್ಟಿಕ್ ಹಾಕಿಕೊಳ್ಳುವುದು ಸೂಕ್ತ ಪರಿಹಾರವಲ್ಲ. ತುಟಿಗಳಿಗೆ ಆಗಾಗ ಈ ಸಣ್ಣಪುಟ್ಟ ಪ್ಯಾಕ್‌ಗಳನ್ನು ಹಾಕಿಕೊಳ್ಳಬೇಕು. ಗುಲಾಬಿ ಜಲ ಗುಲಾಬಿ ಜಲವು ಚರ್ಮಕ್ಕೆ ಆಹ್ಲಾದ ನೀಡಿ ಮೃದುವಾಗಿ ಮಾರ್ಪಾಡು ಮಾಡುತ್ತದೆ. ಈ ನೀರು ನೈಜವಾಗಿಯೇ ತುಟಿಗಳಿಗೆ ತಿಳಿ ಗುಲಾಬಿ ಬಣ್ಣವನ್ನು ನೀಡುತ್ತದೆ. ಕೆಲವು ಹನಿಗಳಷ್ಟು ಗುಲಾಬಿ ಜಲ, ಸ್ವಲ್ಪ ಜೇನು ಬೆರಸಿ ತುಟಿಗಳಿಗೆ […]

Advertisement

Wordpress Social Share Plugin powered by Ultimatelysocial