ಗ್ರಾಮ ಪಂಚಾಯಿತಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಯ ಬಳಿ ಲೋಡೆಡ್ ಪಿಸ್ತೂಲ್ ಪತ್ತೆಯಾಗಿದೆ ಬೆಳಗಾವಿ ತಾಲೂಕಿನ ದೇಸೂರ ಗ್ರಾಮದಲ್ಲಿ ಪಿ.ಆರ್.ಓ.ಆಗಿ ನಿಯೋಜನೆಗೊಂಡಿದ್ದ ಅಧಿಕಾರಿ ಕರ್ತವ್ಯಕ್ಕೆ ಬಂದಾಗ ಲೈಸೆನ್ಸ್ ಇರುವ ಪಿಸ್ತೂಲ್ ಜೊತೆಗೆ ತೆಗೆದುಕೊಂಡು ಬಂದಿದ್ದಾರೆ. ಚುನಾವಣಾ ಸಿಬ್ಬಂದಿಯಿಂದ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಚುನಾವಣಾ ಅಧಿಕಾರಿಗೆ ಮಾಹಿತಿ ನೀಡಿ ಪಿ.ಆರ್.ಓ. ಅವರನ್ನು ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಮಹಿಳಾ […]

ಕಲಬುರ್ಗಿ ಜಿಲ್ಲಾ ಕಮಲಾಪೂರ ತಾಲ್ಲೂಕಿನ ಸೊಂತ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮಹತ್ವದ ತಿರುವು ಕಂಡಿದೆ… ಚಳಿ ಇದ್ದರು ಕೂಡ ಜನರು ತಮ್ಮ ಮತವನ್ನು ಚಲಾಯಿಸಲು ಬೆಳಿಗ್ಗೆಯಿಂದಲೆ ಸಾಲು ಸಾಲು ನಿಂತಿದ್ದು,ಈ ಬಾರಿ ಚುನಾವಣೆ ಗ್ರಾಮ ಪಂಚಾಯಿತಿ ಹಬ್ಬ ಎಂದು ಜನರು ಹೇಳುತ್ತಿದ್ದಾರೆ… ಇದನ್ನೂ ಓದಿ:  ಕನ್ನಕಳವು ಮಾಡುತ್ತಿದ್ದ 3ಜನ ಆರೋಪಿ ಗಳ ಬಂಧನ

ಮತದಾನ ಕಟ್ಟೆಯಲ್ಲಿ ಗಲಾಟೆಯ ಹಿನ್ನೆಲೆ ಮತದಾನ ಸ್ಥಗಿತವಾಗಿತ್ತು. ಈ ಘಟನೆಯು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಏರುಂಗೇರೆ ಗ್ರಾಮದಲ್ಲಿ ನಡೆದಿದೆ. ವಯಸ್ಕರನ್ನು ಆಯ ಅಭ್ಯರ್ಥಿಯ ಬೆಂಬಲಿಗರು ಕರೆದುಕೊಂಡು ಮತದಾನ ಹಾಕಿಸುತಿದ್ದಕ್ಕೆ ಗಲಾಟೆ ನೆಡದಿದ್ದು, ಗಲಾಟೆಗೊಂಡ ಗ್ರಾಮದಲ್ಲಿ ಚುನಾವಣೆ ಸ್ಥಗಿತವಾಗಿತ್ತು ಮತ್ತು ಗ್ರಾಮದಲ್ಲಿ ಪೊಲೀಸರು ಬಿಗಿ ಬಂದೋ ಬಸ್ತ್ ಮಾಡಿದ್ದಾರೆ. ಇದನ್ನೂ ಓದಿ: ಬಿಜೋಯ್ ಅವರ ಪುತ್ರ ಅನುಭವ್ ಕಿಡ್ನಾಪ್ ಪ್ರಕರಣ

ಗ್ರಾಮ ಪಂಚಾಯ್ತಿ ಎಲೆಕ್ಷನ್ ಎಫೆಕ್ಟ್  ಬೆಂಗಳೂರಿಂದ ಗ್ರಾಮಗಳಿಗೆ ಹಳ್ಳಿಗರು ಆಗಮಿಸುತ್ತಿದ್ದಾರೆ. ದುಡಿಯಲು ಬೆಂಗಳೂರು, ಹೈದ್ರಾಬಾದ್ ತೆರಳಿದ್ದ ಯಾದಗಿರಿ ಜನ  ಆಗಮಿಸುತ್ತಿದ್ದಾರೆ. ಬಸ್ ಮೂಲಕ ಯಾದಗಿರಿ, ಸುರಪುರ ಬಸ್ ನಿಲ್ದಾಕ್ಕೆ ಜನರ ಆಗಮಿಸುತ್ತಿದ್ದು, ಗ್ರಾಮಸ್ಥರು ಆಟೋ ಮೂಲಕ ಗ್ರಾಮಗಳಿಗೆ ತೆರಳಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಾರ್ ಮಾಲೀಕರಿಗೆ ಮುಖ್ಯ ಮಾಹಿತಿ

Advertisement

Wordpress Social Share Plugin powered by Ultimatelysocial