ಗುಡಿಸಲಿಗೆ ಬೆಂಕಿ ಬಿದ್ದು ದನ ಕರುಗಳು ಸಜೀವ ದಹನವಾಗಿರುವ ಮನಕಲಕುವ  ಘಟನೆ ಕಲಬುರ್ಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಮರತೂರು ಗ್ರಾಮದಲ್ಲಿ ನಡೆದಿದೆ. ತೋಟದ ಗುಡಿಸಲಿಗೆ ಆಕಸ್ಮಿಕವಾಗಿ ಬಿದ್ದ ಬೆಂಕಿಯಿಂದ ಗುಡಿಸಲು ಸಂಪೂರ್ಣ ಸುಟ್ಟು ಹೋಗಿದೆ. ರೈತ ದಯಾನಂದ ಮರತೂರ ಅವರಿಗೆ ಸೇರಿದ ದನ ಕರುಗಳು ಪ್ರಾಣ ಕಳೆದುಕೊಂಡಿದ್ದೆ. ಇದನ್ನೂ ಓದಿ: ಸಿಡಿ ಲೇಡಿ ಬೆನ್ನಿಗೆನಿಂತ ರಾಜ್ಯ ಮಹಿಳಾ ಆಯೋಗ  

ಕಲಬುರ್ಗಿಯ ಸೇಡಂನ ಮೋಮಿನಪುರ ಬಡಾವಣೆಯ ರಾಜು ತಾಯಿತ್ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಸ್ಫೋಟದ ರಭಸಕ್ಕೆ ಮನೆಯಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿವೆ ಹಾಗೂ ನಾಲ್ವರಿಗೆ ಗಾಯಗಳಾಗಿದ್ದವು, ತಕ್ಷಣವೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುಗಳ ಪೈಕಿ ಮತ್ತೋರ್ವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮನೆ ಮಾಲೀಕ ರಾಜು ತಾಯಿತ್(50) ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಹಾಗೂ ಗಾಯಗೊಂಡವರು ಮೃತನ ತಾಯಿ ಗಂಗಮ್ಮ ತಾಯಿತ್ (70),ಹೆಂಡತಿ ಸುಮಾ ತಾಯಿತ್ (40) ಮತ್ತು ಆತನ ಮಗ ಬಸಪ್ಪ […]

Advertisement

Wordpress Social Share Plugin powered by Ultimatelysocial