ರಾಜ್ಯದ ಆಟೋ, ಕ್ಯಾಬ್ ಚಾಲಕರಿಗೆ ಸಾರಿಗೆ ಸಚಿವ ಲಕ್ಷö್ಮಣ ಸವದಿ ಸಿಹಿಸುದ್ದಿ ನೀಡಿದ್ದು, ಆಟೋ, ಕ್ಯಾಬ್, ಚಾಲಕರಿಗೆ ೫ಸಾವಿರ ರೂಪಾಯಿ ನೀಡೋದಾಗಿ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಲಕ್ಷö್ಮಣ ಸವದಿ, ಸೇವಾ ಸಿಂಧೂ ಯೋಜನೆಯಲ್ಲಿ ಇದುವರೆಗೂ ೧ಲಕ್ಷ ೨೮ಸಾವಿರ ಅರ್ಜಿಗಳು ಬಂದಿದ್ದು, ಅವರೆಲ್ಲರಿಗೂ ನಾಳೆಯಿಂದ ೫ ಸಾವಿರ ಹಣವನ್ನು ಅವರ ಖಾತೆಗೆ ಹಾಕುತ್ತೇವೆ ಎಂದು ಹೇಳಿದ್ದಾರೆ.