ಲಾಕ್ಡೌನ್ನಿಂದ ಕಾರ್ಮಿಕರ ಜೀವನ ಸಂಕಷ್ಟಕ್ಕೀಡಾಗಿದೆ. ಊರು ಬಿಟ್ಟು ರಾಜಧಾನಿಗೆ ಕೆಲಸಕ್ಕೆ ಬಂದ ಕಾರ್ಮಿಕರಿಗೆ ಜೀವನ ಸಾಗಿಸಲು ಕಷ್ಟ ಬಂದೋದಗಿದೆ. ಚಾಮರಾಜಪೇಟೆಯಲ್ಲಿ ಬಿಹಾರಿ ಕಾರ್ಮಿಕರ ದಂಡು ಊರಿಗೆ ತೆರಳಲು ಪರಿತಪಿಸುತ್ತಿದ್ದಾರೆ. ಸರ್ಕಾರದಿಂದ ಇಂದು ಕಾರ್ಮಿಕರನ್ನು ತಮ್ಮ ಊರುಗಳಿಗೆ ತಲುಪಿಸಲು ೪೦ಬಿಎಂಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ರಾಜಧಾನಿಯಿಂದ ಮಾಲೂರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದು, ಅಲ್ಲಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಕಾರ್ಮಿಕರಿಗೆ ಮಾಲುರಿನಿಂದ ವಿಶೇಷ ರೈಲು ಮೂಲಕ ಬಿಹಾರಿಗೆ ಕಳುಹಿಸಲಾಗುತ್ತಿದೆ.