ಅಪ್ಪ ತಿರುವೆಂಗಳೇಶನೆ ನಿರ್ದೋಷನೆ
ಆಪಾದಮೌಳಿ ಎನ್ನೊಳು ಅಘ ಬಹಳ
ಶ್ರೀಪತಿ ಕ್ಷಮಿಸಿ ಕಾಯಿದೆಯ ಉದಧಿಶಯ್ಯಾ
ಜಗದಘಹರನೆಂಬುದು ನಿನ್ನ ಬಿರುದು
ತ್ರಿಗುಣಾತೀತನೆ ರಾಮನೆ ಗುಣಧಾಮನೆ
ಇನ್ನೆನ್ನ ಕಲುಷವಾರಿಸೊ ಭವತಾರಿಸೊ
ಪ್ರಸನ್ನ ವೆಂಕಟರಮಣ ಭಯಶಮನ
ಸಾಹಿತ್ಯ: ಪ್ರಸನ್ನ ವೆಂಕಟದಾಸರು
ನಮ್ಮ ಸಂಗೀತದ ಅಗಾಧತೆಯ ಭೀಮಸೇನರ ಈ ಹಾಡು ನಾವು ಸುಖಿಸುವುದಕ್ಕೆ ಆಪ್ತವಾಗಿದೆ.
ನಾವೆಷ್ಟು ತಪ್ಪು ಮಾಡಿದ್ದರೂ ನಮ್ಮನ್ನು ಸಲಹುವ ಆ ಕರುಣಾಳುವಿನ ದಿವ್ಯ ಲೋಕದಲ್ಲಿ
ನಮ್ಮನ್ನು ವಿಹಾರಕ್ಕೆ ಕೈ ಹಿಡಿದು ಸಂಚರಿಸುವ
ಸುಂದರ ಅನುಭಾವ ನೀಡುವಂತಿದೆ. ನೀ ಎಮ್ಮ ಕಲುಷಗಳನ್ನೆಲ್ಲಾ ಕಳೆದು ಭವದಾಟಿಸೋ
ಪ್ರಸನ್ನ ವೆಂಕಟರಮಣ…
ನಿನಗೆ, ಗುರು ಪ್ರಸನ್ನ ವೆಂಕಟದಾಸರಿಗೆ ಮತ್ತು ಗುರು ಭೀಮಸೇನ ಜೋಷಿಯವರಿಗೆ ನಮ್ಮ ಪಾದಾಭಿವಂದನೆ ಸ್ವಾಮಿ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: