ತಾಯ್ನಾಡಿಗೆ ಬಂದಿಳಿದ ಹನೂರಿನ ಎರಡನೇ ವಿದಾರ್ಥಿ

ಹನೂರು: ಭಾರತೀಯ ರಾಯಭಾರಿ ಕಚೇರಿಯ ನೆರವಿನಿಂದ ಹನೂರಿನ ಸ್ವಾತಿ ಎಂಬ ಮೆಡಿಕಲ್ ವಿದ್ಯಾರ್ಥಿನಿ ತಾಯ್ನಾಡಿಗೆ ಬಂದಿಳಿದಿದ್ದು ಜಿಲ್ಲೆಯ ಇನ್ನೂ ಇಬ್ಬರು ವಿದ್ಯಾರ್ಥಿಗಳು ಬರಬೇಕಿದೆ.ಉಕ್ರೇನ್ ನ ಕೀವ್ ನಗರದಲ್ಲಿ ತಾರಸ್ ಶೆವ್ಚೆಂಕೋ ರಾಷ್ಟ್ರೀಯ ವಿವಿಯಲ್ಲಿ ಐದನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಹನೂರಿನ ಸ್ವಾತಿ ಇಂದು ಮಧ್ಯಾಹ್ನ ಬೆಂಗಳೂರಿಗೆ ಬಂದಿದ್ದಾರೆ. ಉಕ್ರೇನ್ ನಿಂದ ಹಂಗೇರಿ ಗಡಿಗೆ ತೆರಳಿ ಅಲ್ಲಿಂದ ಬುಡಾಪೇಸ್ಟ್ ಬಳಿಕ ದೆಹಲಿ ಅಲ್ಲಿಂದ ಬೆಂಗಳೂರಿಗೆ ಮರಳಿ ಬಂದಿದ್ದಾರೆ‌.ಸ್ವಾತಿ ಹನೂರಿನ ಸಂಜೆವಾಣಿ ಪತ್ರಿಕೆ ವರದಿಗಾರ ರವಿ ಎಂಬವರ ಮಗಳಾಗಿದ್ದಾರೆ. ಕೊಳ್ಳೇಗಾಲ ಮೂಲದ ಭೂಮಿಕಾ ವಿದ್ಯಾರ್ಥಿನಿ ರಾಯಭಾರಿ ಕಚೇರಿ ಸಂಪರ್ಕದಲ್ಲಿದ್ದು ಆದಷ್ಟು ಶೀಘ್ರ ತಾಯ್ನಾಡಿಗೆ ಸೇರಿಕೊಳ್ಳುವ ಭರವಸೆ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಮಧ್ಯೆ, ಕ್ವಾಡ್ ನಾಯಕರು ಇಂದು ವಾಸ್ತವಿಕವಾಗಿ ಭೇಟಿ!

Thu Mar 3 , 2022
ನಡೆಯುತ್ತಿರುವ ರಷ್ಯಾ-ಉಕ್ರೇನ್ ಸಂಘರ್ಷದ ಮಧ್ಯೆ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸಲು ಕ್ವಾಡ್ ನಾಯಕರು ಗುರುವಾರ ಸಭೆ ನಡೆಸಲಿದ್ದಾರೆ. ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸುವ ಉದ್ದೇಶದಿಂದ ಸಭೆ ನಡೆಸಲಾಗುತ್ತಿದೆ. ನವದೆಹಲಿ: ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸುವ ಉದ್ದೇಶದಿಂದ ಕ್ವಾಡ್ ನಾಯಕರು ಗುರುವಾರ ಸಭೆ ನಡೆಸಲಿದ್ದಾರೆ. ಕ್ವಾಡ್ ಲೀಡರ್‌ಗಳ ವರ್ಚುವಲ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ […]

Advertisement

Wordpress Social Share Plugin powered by Ultimatelysocial