ತಂತ್ರಜ್ಞಾನವೇ ಭವಿಷ್ಯದ ಶಕ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 23ನೇ ಬೆಂಗಳೂರು ತಂತ್ರಜ್ಞಾನ ಮೇಳ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತ ನಿರ್ಮಾಣದ ಉದ್ದೇಶ ಸಾಕಾರಗೊಳ್ಳಲು ತಂತ್ರಜ್ಞಾನ ಸಹಕಾರಿಯಾಗಲಿದೆ. 5 ವರ್ಷಗಳ ಹಿಂದೆ ನಾವು ಡಿಜಿಟಲ್ ಇಂಡಿಯಾ ಪರಿಚಯಿಸಿದೆವು. ಈಗ ಡಿಜಿಟಲ್ ಇಂಡಿಯಾ ಎಂದರೆ ನಮ್ಮ ಜನರ ಜೀವನ ಶೈಲಿಯಾಗಿದೆ.
ಜನರ ಬದುಕು ಬದಲಾಗಿದೆ. ನಮ್ಮ ಸರ್ಕಾರ ಟೆಕ್ನಾಲಜಿಗೆ ಆದ್ಯತೆ ಕೊಟ್ಟಿದೆ. ತಂತ್ರಜ್ಞಾನ ಮಾರುಕಟ್ಟೆ ಅಭಿವೃದ್ಧಿಪಡಿಸಿದೆ. ಕೃಷಿಕ ಸಮುದಾಯವೂ ಕೂಡ ಈ ತಾಂತ್ರಿಕ ಅಭಿವೃದ್ಧಿ ಕಂಡಿದೆ. ಬಡವರೂ ಕೂಡ ತಂತ್ರಜ್ಞಾನದ ಭಾಗವೇ ಆಗಿದ್ದಾರೆ. ನಮ್ಮ ಆಯುಷ್ಮಾನ್ ಭಾರತ್ ಯೋಜನೆ ಕೂಡ ತಾಂತ್ರಿಕ ಅಭಿವೃದ್ಧಿಯ ಕೂಸಾಗಿದೆ ಎಂದು ಬಣ್ಣಿಸಿದರು.
ಇನ್ನೂ ಓದಿ: ಐಶ್ವರ್ಯ ಅಮರ್ತ್ಯ ಮದುವೆ ನಿಶ್ಚಿತಾರ್ಥ-ಖಾಸಗಿ ಹೋಟೆಲ್ ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ