ಮತಾಂತರಗೊಂಡ ವ್ಯಕ್ತಿಯಿಂದ ಹಿಂದೂ ದೇಗುಲದ ವಿಗ್ರಹ ಭಗ್ನ..!

ಮತಾಂತರಗೊಂಡ ವ್ಯಕ್ತಿಯಿಂದ ಹಿಂದೂ ದೇಗುಲದ ವಿಗ್ರಹ ಭಗ್ನಗೊಳಿಸಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ವಡ್ಡರಗುಡಿ ಗ್ರಾಮದಲ್ಲಿ ನಡೆದಿದೆ…ದೇವರ ವಿಗ್ರಹ ಮೂರ್ತಿಯನ್ನ ಒಡೆದು ಹಾಕಿ ವಿಕೃತಿ ಮೆರೆದಿದ್ದಾರೆ… ಚಿಕ್ಕಬೇರ್ಯ ಗ್ರಾಮದ ಮಹೇಶ್ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿಯ ವಿಗ್ರಹ ಒಡೆದು ಹಾಕಿದ್ದಾನೆ.  ಕೃತ್ಯ ನಡೆಸಿತ್ತಿದ ವೇಳೆ ಗ್ರಾಮಸ್ಥರ ಕೈಗೆ ಆರೋಪಿ ಸಿಕ್ಕಿ ಬಿದ್ದಿದ್ದರಿಂದ  ಗ್ರಾಮಸ್ಥರು ಆರೋಪಿಯನ್ನ ಪೊಲೀಸರ ವಶಕ್ಕೆ ನೀಡಿದ್ದಾರೆ…ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಮಹೇಶ್ ಎಂದು ಗ್ರಾಮಸ್ಥರು ಆರೋಪ ಮಾಡಿದ್ದು,ಹಿಂದೂ ದೇವಾಲಯದ ಮೇಲೆ ವಿಕೃತಿ ಮೆರೆವ ತಂಡ ವಿದ್ದು ಇದರ ಬಗ್ಗೆ ಕ್ರಮ ವಹಿಸುವಂತೆ ಗ್ರಾಮಸ್ಥರ ಒತ್ತಾಯ ಮಾಡಿದ್ದಾರೆ..ಇನ್ನು ಈ ಹಿಂದೆ ಕ್ರೈಸ್ತರಿಲ್ಲದ ಸ್ಥಳದಲ್ಲಿ ಚರ್ಚ್ ಕಾನೂನು ಬಾಹಿರ ವಾಗಿ ನಿರ್ಮಾಣ ಹಿನ್ನಲೆ.ಚರ್ಚ್ ಕಟ್ಟಡ ತೆರೆವುಗೊಳಿಸಲು ಗ್ರಾ.ಪಂ.ಗೆ ಗ್ರಾಮಸ್ಥರು ಮನವಿ ಸಲ್ಲಿಸಲಾಗಿತ್ತು.ಈ ಹಿನ್ನಲೆ ದೇವಸ್ಥಾನದ ಮೇಲೆ ದಾಳಿಗೆ ಮುಂದಾಗಿದ್ದರೆ ಎಂದು ಹೇಳಿದ್ಆದಾರೆ. ಇನ್ನು ಭಗ್ನಗೊಂಡಿರುವ ಗ್ರಾಮದೇವತೆ ಮರು ಪ್ರತಿಷ್ಟಾಪಿಸಲು ಸಚಿವ ನಾರಾಯಣ್ ಗೌಡ ಭರವಸೆ ನೀಡಿದ್ದಾರೆ…

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಯಲ್ಲಿ ತಡರಾತ್ರಿ ರಾಯಣ್ಣನ ಮೂರ್ತಿ ಧ್ವಂಸ...!!

Sat Dec 18 , 2021
ಬೆಳಗಾವಿ-ತಲವಾರ,ಬರ್ಚಿ ಹಿಡಿದುಕೊಂಡು ಬಂದ ಕಿಡಗೇಡಿಗಳು ರಾಯಣ್ಣ ಸರ್ಕಲ್ ನಲ್ಲಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಮೇಲೆ ದಾಳಿ ಮಾಡಿ ಮೂರ್ತಿಯ ಮುಖವನ್ನು ಭಗ್ನಗೊಳಿಸಿ,ಖಡ್ಗವನ್ನು ಮುರಿದು ಮೂರ್ತಿಯ ಕೈಯನ್ನು ಧ್ವಂಸ ಮಾಡಿದ ಘಟನೆ ಮದ್ಯರಾತ್ರಿ ಅನಿಗೋಳದಲ್ಲಿ ನಡೆದಿದೆ..ತಡರಾತ್ರಿ ಏಕಾಏಕಿ ದಾಳಿ ಮಾಡಿದ ಕಿಡಗೇಡಿಗಳು ರಾಯಣ್ಣನ ಮೂರ್ತಿಯ ಮೇಲೆ ದಾಳಿ ಮಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಸಂಪೂರ್ಣವಾಗಿ ಭಗ್ನಗೊಳಿಸಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial