ಮತಾಂತರಗೊಂಡ ವ್ಯಕ್ತಿಯಿಂದ ಹಿಂದೂ ದೇಗುಲದ ವಿಗ್ರಹ ಭಗ್ನಗೊಳಿಸಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ವಡ್ಡರಗುಡಿ ಗ್ರಾಮದಲ್ಲಿ ನಡೆದಿದೆ…ದೇವರ ವಿಗ್ರಹ ಮೂರ್ತಿಯನ್ನ ಒಡೆದು ಹಾಕಿ ವಿಕೃತಿ ಮೆರೆದಿದ್ದಾರೆ… ಚಿಕ್ಕಬೇರ್ಯ ಗ್ರಾಮದ ಮಹೇಶ್ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿಯ ವಿಗ್ರಹ ಒಡೆದು ಹಾಕಿದ್ದಾನೆ. ಕೃತ್ಯ ನಡೆಸಿತ್ತಿದ ವೇಳೆ ಗ್ರಾಮಸ್ಥರ ಕೈಗೆ ಆರೋಪಿ ಸಿಕ್ಕಿ ಬಿದ್ದಿದ್ದರಿಂದ ಗ್ರಾಮಸ್ಥರು ಆರೋಪಿಯನ್ನ ಪೊಲೀಸರ ವಶಕ್ಕೆ ನೀಡಿದ್ದಾರೆ…ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಮಹೇಶ್ ಎಂದು ಗ್ರಾಮಸ್ಥರು ಆರೋಪ ಮಾಡಿದ್ದು,ಹಿಂದೂ ದೇವಾಲಯದ ಮೇಲೆ ವಿಕೃತಿ ಮೆರೆವ ತಂಡ ವಿದ್ದು ಇದರ ಬಗ್ಗೆ ಕ್ರಮ ವಹಿಸುವಂತೆ ಗ್ರಾಮಸ್ಥರ ಒತ್ತಾಯ ಮಾಡಿದ್ದಾರೆ..ಇನ್ನು ಈ ಹಿಂದೆ ಕ್ರೈಸ್ತರಿಲ್ಲದ ಸ್ಥಳದಲ್ಲಿ ಚರ್ಚ್ ಕಾನೂನು ಬಾಹಿರ ವಾಗಿ ನಿರ್ಮಾಣ ಹಿನ್ನಲೆ.ಚರ್ಚ್ ಕಟ್ಟಡ ತೆರೆವುಗೊಳಿಸಲು ಗ್ರಾ.ಪಂ.ಗೆ ಗ್ರಾಮಸ್ಥರು ಮನವಿ ಸಲ್ಲಿಸಲಾಗಿತ್ತು.ಈ ಹಿನ್ನಲೆ ದೇವಸ್ಥಾನದ ಮೇಲೆ ದಾಳಿಗೆ ಮುಂದಾಗಿದ್ದರೆ ಎಂದು ಹೇಳಿದ್ಆದಾರೆ. ಇನ್ನು ಭಗ್ನಗೊಂಡಿರುವ ಗ್ರಾಮದೇವತೆ ಮರು ಪ್ರತಿಷ್ಟಾಪಿಸಲು ಸಚಿವ ನಾರಾಯಣ್ ಗೌಡ ಭರವಸೆ ನೀಡಿದ್ದಾರೆ…
ಮತಾಂತರಗೊಂಡ ವ್ಯಕ್ತಿಯಿಂದ ಹಿಂದೂ ದೇಗುಲದ ವಿಗ್ರಹ ಭಗ್ನ..!
Please follow and like us: