ಪ್ರೀತಿಸಿದವಳ ಆಸೆ ಈಡೇರಿಸಲು ಮಾಡಿದ್ದು ಕಳ್ಳತನ.

ಅನ್ನವಿತ್ತು, ಆಶ್ರಯ ಕೊಟ್ಟ ಅಣ್ಣನ ಮನೆಗೆ ಕನ್ನ ಹಾಕಿದ ಸಹೋದರ.ಪ್ರಿಯತಮೆಯ ಗೋವಾ ಆಸೆಗೆ ಮನೆಯಲ್ಲೇ ಚಿನ್ನಾಭರಣ ಕಳುವು.ಆಡುಗೋಡಿ ಪೊಲೀಸರಿಂದ ಆರೋಪಿಯ ಬಂಧನ.ಮೊಹಮ್ಮದ್ ಇರ್ಫಾನ್ ಬಂಧಿತ ಆರೋಪಿ.ಆಡುಗೋಡಿಯ ಮಹಾಲಿಂಗೇಶ್ವರ ಬಂಡೆ ಏರಿಯಾದಲ್ಲಿ ವಾಸವಿದ್ದ ಇರ್ಫಾನ್.ಅಣ್ಣ ಸಲ್ಮಾನ್, ಅತ್ತಿಗೆ ಹಾಗೂ ತಾಯಿಯೊಂದಿಗೆ ವಾಸವಿದ್ದ.ಸುದ್ದುಗುಂಟೆಪಾಳ್ಯದಲ್ಲಿ ಸೇಲ್ಸ್ ಮನ್ ಕೆಲಸ ಮಾಡಿಕೊಂಡಿದ್ದ ಸಲ್ಮಾನ್.ಕೆಲಸವಿಲ್ಲದೇ ಓಡಾಡಿಕೊಂಡಿದ್ದ ಆರೋಪಿ ತಮ್ಮ ಇರ್ಫಾನ್.ಮನೆಯಲ್ಲಿ ಬೀರುವಿನಲ್ಲಿದ್ದ 103 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ.ನವೆಂಬರ್ 29ರಂದು‌ ಬೀರು ಪರಿಶೀಲಿಸಿದಾಗ ಕಳ್ಳತನ ಬಯಲಾಗಿತ್ತು.4-5 ದಿನಗಳಿಂದ ಮನೆಗೆ ಬಾರದೇ ಉಳಿದಿದ್ದ ತಮ್ಮ ಇರ್ಫಾನ್ ವಿರುದ್ಧ ದೂರು ನೀಡಿದ್ದ ಸಲ್ಮಾನ್.ದೂರಿನನ್ವಯ ತನಿಖೆ ಕೈಗೊಂಡಾಗ ಕಳ್ಳತನದಲ್ಲಿ ಇರ್ಫಾನ್ ಕೈವಾಡ ಬಯಲು.ಮಾಡೋಕೆ ಕೆಲಸವಿಲ್ಲದಿದ್ದರೂ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ.ಗೋವಾಗೆ ಹೋಗಿ ಮೋಜು ಮಸ್ತಿ ಮಾಡುವ ಇಚ್ಚೆ ಹೊಂದಿದ್ದ ಇರ್ಫಾನ್ ನ ಪ್ರೇಯಸಿ.ಅದರಂತೆ ಹಣ ಹೊಂದಿಸಲು ಮನೆಯಲ್ಲೇ ಕಳ್ಳತನ ಮಾಡಿದ್ದ ಆರೋಪಿ‌ಕದ್ದ ಚಿನ್ನಾಭರಣ ಅಡವಿಟ್ಟು ಪ್ರೇಯಸಿ ಜೊತೆ ಗೋವಾಗೆ ಹೋಗಿದ್ದ.ಗೋವಾದಲ್ಲಿದ್ದಾಗಲೇ ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿರುವ ಪೊಲೀಸರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಚಂಗಚಹಳ್ಳಿ ಗ್ರಾಮದಲ್ಲಿ ಜೆ.ಜೆ. ಎಂ. ಕಾಮಗಾರಿ ಯಿಂದ ರಸ್ತೆ ಹಾಳು. ಗ್ರಾಮಸ್ಥರ ಆರೋಪ....

Tue Dec 27 , 2022
ಯಳಂದೂರು ತಾಲ್ಲೂಕಿನ ಚಂಗಚಹಳ್ಳಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಯಿಂದ ರಸ್ತೆಗಳು ಹದಗೆಡುತ್ತಿವೆ ಎಂದು ಗ್ರಾಮಸ್ಥರು ಆರೋಪ ಮಾಡಿದರು….ನಮ್ಮ ಗ್ರಾಮದಲ್ಲಿ ಮನೆಗಳಿಗೆ ಜೆ ಜೆ ಎಂ ವತಿಯಿಂದ ನಲ್ಲಿ ಸಂಪರ್ಕ ಕಲ್ಪಿಸುತ್ತಿರುವುದು ಖುಷಿಯ ವಿಷಯ. ಆದರೆ ಮೀಟರ್ ಅಳವಡಿಸಿ ಶುಲ್ಕ ಕಟ್ಟಬೇಕು ಎಂಬುದು ಖಂಡನಿಯ ಎಂದರು….ಚಂಗಚಹಳ್ಳಿ ಗ್ರಾಮದಲ್ಲಿ ಜೆ ಜೆ ಎಂ ಕಾಮಗಾರಿಯನ್ನು ಎಸ್ಟಿಮೇಟ್ ಪ್ರಕಾರ ಮಾಡುತ್ತಿಲ್ಲ, ಹಳ್ಳ ತೆಗೆದ ಮೇಲೆ ಸಿಮೆಂಟ್ ನಿಂದ ಮುಚ್ಚಬೇಕು ಹಾಗೆ ಬಿಟ್ಟಿದ್ದಾರೆ. ಇಂಜಿನಿಯರ್ […]

Advertisement

Wordpress Social Share Plugin powered by Ultimatelysocial