ಕೋಲ್ಕತಾ: ಒಬ್ಬ ಟಿಎಂಸಿ ಕಾರ್ಯಕರ್ತ ನಿಮಗೆ (ಜನಸಾಮಾನ್ಯರಿಗೆ) ಹೊಡೆದ ಎಂದರೆ ಕಣ್ಣೀರು ಹಾಕಬೇಡಿ. ಆತನನ್ನು ಕಂಬಕ್ಕೆ ಕಟ್ಟಿ4-5 ಸಲ ಕಪಾಳಕ್ಕೆ ಹೊಡೆಯಿರಿ ಎಂದು ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಕರೆ ನೀಡಿದ್ದಾರೆ. ಇದು ಬಂಗಾಳ ರಾಜಕೀಯದಲ್ಲಿ ಭಾರಿ ವಿವಾದ ಸೃಷ್ಟಿಸಿದೆ.
ಇತ್ತೀಚೆಗೆ ಬಿಜೆಪಿ ಕಾರ್ಯಕರ್ತ ಸಾಗರ್ ಬಿಸ್ವಾಸ್ ಎಂಬಾತ ‘ದೀದಿ ಸುರಕ್ಷಾ ಕವಚ’ ಎಂಬ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ರಸ್ತೆ ಸಮಸ್ಯೆ ಬಗ್ಗೆ ಕೇಳಿದಾಗ, ಆತನಿಗೆ ಟಿಎಂಸಿ ಕಾರ್ಯಕರ್ತನೊಬ್ಬ ಕಪಾಳಕ್ಕೆ ಹೊಡೆದಿದ್ದ. ಈ ಹಿನ್ನೆಲೆಯಲ್ಲಿ ಹೂಗ್ಲಿ ಸಂಸದೆ ಲಾಕೆಟ್, ಇಂಥ ಕೃತ್ಯಗಳಿಗೆ ಕಪಾಳಮೋಕ್ಷದ ಮೂಲಕವೇ ಪ್ರತೀಕಾರ ಕೈಗೊಳ್ಳಿ ಎಂದು ಕರೆ ನೀಡಿದ್ದಾರೆ. ಈ ಹೇಳಿಕೆಗೆ ಟಿಎಂಸಿ ಆಕ್ಷೇಪ ವ್ಯಕ್ತಪಡಿಸಿದೆ.
https://play.google.com/store/apps/details?id=com.speed.newskannada