ನೆಲ ಕಚ್ಚಿದ ಕೊಬ್ಬರಿ ಬೆಲೆ ಕನಿಷ್ಠ ಕ್ವಿಟಂಲ್ ಕೊಬ್ಬರಿಗೆ 20 ಸಾವಿರ ಬೆಂಬಲ ಬೆಲೆ ನಿಡುವಂತೆ ಸರ್ಕಾರಕ್ಕೆ ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ಒತ್ತಾಯ.ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ಕ್ವಿಟಂಲ್ ಕೊಬ್ಬರಿಗೆ 5 ಸಾವಿರ ರೂಪಾಯಿ ಸಹಾಯಧನ ನಿಡಬೇಕು. ಕೊಬ್ಬರಿಗೆ ಸರಿಯಾದ ಗುಣಮಟ್ಟ ನಿಗಧಿ (ಎಫ್ ಎಕ್ಯೂ) ನಿಯಮದಂತೆಯೇ ಕೊಬ್ಬರಿ ಖರೀದಿ ಮಾಡಿದ 72 ಗಂಟೆಯೊಳಗೆ ರೈತರ ಖಾತೆಗೆ ಹಣವನ್ನು ವರ್ಗಾಯಿಸಬೇಕು ತಪ್ಪಿದಲ್ಲಿ ತಿಂಗಳಿಗೆ ಕನಿಷ್ಟ ಶೇಕಡ 5 ರಂತೆ ಬಡ್ಡಿಯ ಜೊತೆ ಮೂರು ತಿಂಗಳ ಒಳಗೆ ರೈತರಿಗೆ ಹಣವನ್ನು ಸಂದಾಯ ಮಾಡಬೇಕು.ಸರ್ಕಾರ ಕೊಬ್ಬರಿಯನ್ನು ಖರೀದಿ ಮಾಡುವಾಗ ಗರಿಷ್ಟ ಖರೀದಿ ನಿಯಮವನ್ನು ಕೈಬಿಡಬೇಕು ಮತ್ತು ರೈತರು ಬೆಳೆದು ತಂದ ಉತ್ಪನ್ನವನ್ನು ಸಂಪೊರ್ಣವಾಗಿ ಖರೀದಿ ಮಾಡಿಕೊಳ್ಳಬೇಕು . ರೈತರು ಬೆಳೆದ ಬೆಳೆಗಳನ್ನು ಕಾರಕಾರಕ್ಕೆ ಬೆಳೆ ಸಮಿಕ್ಷೇಯಲ್ಲಿ ( ಫ್ರೊಟ್ ಐಡಿ ) ಲೋಪವಾಗದಂತೆ ರೈತರ ಉಪಸ್ಥಿತಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು . ಸರ್ಕಾರವು ಸಕಾಲ ಕೇಂದ್ರಗಳಲ್ಲಿ ಪ್ರತಿ ಪಹಣಿಗೆ 25 ರೂಪಾಯಿ ಸುಲಿಗೆ ಮಾಡುವುದನ್ನು ನಿಲ್ಲಿಸಿ ಕೇವಲ 5 ರೂಪಾಯಿ ಮಾತ್ರ ತೆಗೆದುಕೊಳ್ಳಬೇಕು . ರೈತರಿಂದ ನೆಪಡ್ ಮೂಲಕ ಖರೀದಿಸಿದ ಕೊಬ್ಬರಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮತ್ತೆ ಮಾರಾಟಕ್ಕೆ ಬಿಡಬಾರದು ಎಂದು ರಾಯಸಂದ್ರ ರವಿಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ರಮೇಶ್ ಕುಚ್ಚಂಗಿ. ಮಲ್ಲಿಕಾರ್ಜುನ ಮೆಳೆಹಳ್ಳಿ. ಚಕ್ರವರ್ತಿ ಪ್ರಕಾಶ್ .ಮಾರುತಿ ಪ್ರಸಾದ್ ಸಂಕೇನಹಳ್ಳಿ ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada