ಆಕಸ್ಮಿಕ ಬೆಂಕಿ ತಗುಲಿ ಕೊಟ್ಟಿಗೆ ಭಸ್ಮ,ಎರಡು ಎತ್ತುಗಳು ಸಜೀವ ದಹನ….

ಯಳಂದೂರು ತಾಲ್ಲೂಕಿನ ವೈ. ಕೆ.ಮೊಳೆ ಗ್ರಾಮದ ಸಿದ್ದರಾಜು ಎಂಬುವವರಿಗೆ ಸೇರಿದ ಕೊಟ್ಟಿಗೆ ಹಾಗೂ ಎರಡು ಎತ್ತುಗಳು ಮಧ್ಯ ರಾತ್ರಿಯಲ್ಲಿ ಬೆಂಕಿ ಬಿದ್ದು ಸಂಪೂರ್ಣ ಸುಟ್ಟುಹೋಗಿರುವ ಘಟನೆ ನಡೆದಿದೆ…..

ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನ ಪಟ್ಟರು ಸಹ ವಿಫಲವಾಗಿದೆ. ನಂತರ ಅಗ್ನಿ ಶಾಮಕ ದಳ ಹಾಗೂ ಠಾಣೆಗೆ ಮಾಹಿತಿ ನೀಡಿದರು…..

ವೈ ಕೆ ಮೋಳೆ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆಂಪರಾಜು ಮಾತನಾಡಿ ಸಿದ್ದರಾಜು ಎಂಬುವವರಿಗೆ ಸೇರಿದ ಎತ್ತುಗಳು ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ.ಈ ಕುಟುಂಬವು ಈ ಎತ್ತುಗಳನ್ನು ನಂಬಿಕೊಂಡು ವ್ಯವಸಾಯ ನಡೆಸಿ ಜೀವನ ನಡೆಸುತ್ತಿದ್ದರು,ಆಗಾಗಿ ಈ ಬಡ ಕುಟುಂಬಕ್ಕೆ ಸರ್ಕಾರವು ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು…..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬ್ರೆಜಿಲ್​ನಲ್ಲಿ ಭುಗಿಲೆದ್ದ ಪ್ರತಿಭಟನೆ.

Mon Jan 9 , 2023
  ನವ ದೆಹಲಿ:ಬ್ರೆಜಿಲ್​​ನಲ್ಲಿ ಮಾಜಿ ಅಧ್ಯಕ್ಷ ಜೈರ್​ ಬೋಲ್ಸನಾರೋ ಬೆಂಬಲಿಗರು ಪ್ರಾರಂಭಿಸಿರುವ ಗಂಭೀರ ಸ್ವರೂಪದ ಪ್ರತಿಭಟನೆಯ ಬಗ್ಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಜೈರ್​ ಬೋಲ್ಸನಾರೋ ಸೋತಿದ್ದನ್ನು ಒಪ್ಪಿಕೊಳ್ಳಲಾಗದ ಅವರ ಬೆಂಬಲಿಗರು, ಎಡಪಂಥೀಯ ನಾಯಕ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅಧ್ಯಕ್ಷೀಯ ಅಧಿಕಾರಕ್ಕೆ ಏರಿದ್ದರ ವಿರುದ್ಧ ದಂಗೆ ಶುರುವಿಟ್ಟುಕೊಂಡಿದ್ದಾರೆ.ಭಾನುವಾರ ಪ್ರತಿಭಟನಾಕಾರರು ಬ್ರೆಜಿಲ್​​ ಸರ್ಕಾರದ ಸೂಕ್ಷ್ಮ ವಲಯಕ್ಕೇ ದಾಂಗುಡಿ ಇಟ್ಟಿದ್ದರು. ಅಧ್ಯಕ್ಷರ ಭವನ, ಸಂಸತ್ ಭವನ, ಸುಪ್ರೀಂಕೋರ್ಟ್​ಗಳಿಗೆ […]

Advertisement

Wordpress Social Share Plugin powered by Ultimatelysocial