ಯಳಂದೂರು ತಾಲ್ಲೂಕಿನ ವೈ. ಕೆ.ಮೊಳೆ ಗ್ರಾಮದ ಸಿದ್ದರಾಜು ಎಂಬುವವರಿಗೆ ಸೇರಿದ ಕೊಟ್ಟಿಗೆ ಹಾಗೂ ಎರಡು ಎತ್ತುಗಳು ಮಧ್ಯ ರಾತ್ರಿಯಲ್ಲಿ ಬೆಂಕಿ ಬಿದ್ದು ಸಂಪೂರ್ಣ ಸುಟ್ಟುಹೋಗಿರುವ ಘಟನೆ ನಡೆದಿದೆ…..
ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನ ಪಟ್ಟರು ಸಹ ವಿಫಲವಾಗಿದೆ. ನಂತರ ಅಗ್ನಿ ಶಾಮಕ ದಳ ಹಾಗೂ ಠಾಣೆಗೆ ಮಾಹಿತಿ ನೀಡಿದರು…..
ವೈ ಕೆ ಮೋಳೆ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆಂಪರಾಜು ಮಾತನಾಡಿ ಸಿದ್ದರಾಜು ಎಂಬುವವರಿಗೆ ಸೇರಿದ ಎತ್ತುಗಳು ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ.ಈ ಕುಟುಂಬವು ಈ ಎತ್ತುಗಳನ್ನು ನಂಬಿಕೊಂಡು ವ್ಯವಸಾಯ ನಡೆಸಿ ಜೀವನ ನಡೆಸುತ್ತಿದ್ದರು,ಆಗಾಗಿ ಈ ಬಡ ಕುಟುಂಬಕ್ಕೆ ಸರ್ಕಾರವು ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು…..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada