ಜೊತೆಗೆ ಭಾರತ್ ಜೋಡೋ ಪಾದಯಾತ್ರೆ ಬಳಿಕ ಎರಡನೇ ಬಾರಿಗೆ ಜಿಲ್ಲೆಗೆ ಭೇಟಿ ನೀಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನ ಇಬ್ಬರು ರಾಷ್ಟ್ರೀಯ ನಾಯಕರು ಇಂದು ಒಂದೇ ವೇದಿಕೆಯಲ್ಲಿ, ಇಂದು ಮಧ್ಯಾಹ್ನ 3.30ಕ್ಕೆ ಚಾಮರಾಜನಗರದ ರೇಷ್ಮೆಗೂಡು ಮಾರುಕಟ್ಟೆ ಸಮೀಪದ ಆವರಣದಲ್ಲಿ ಕಾಂಗ್ರೆಸ್ ಸಮಾವೇಶ. ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಕ್ಷೇತ್ರಕ್ಕೆ ದಾಂಗುಡಿ ಇಡುತ್ತಿದೆ ಕೈ ಪಡೆ. ಬಿಜೆಪಿಯಿಂದ ವಿ. ಸೋಮಣ್ಣ ಸ್ಪರ್ಧಿಸಿರುವ ಕಾರಣಕ್ಕೆ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಕಾಂಗ್ರೆಸ್.
ಸೆ. 30ರಂದು ಭಾರತ್ ಜೋಡೋ ಯಾತ್ರೆಯನ್ನು ಗುಂಡ್ಲುಪೇಟೆಯಿಂದ ಪ್ರಾರಂಭಿಸಿದ್ದ ರಾಹುಲ್ ಗಾಂಧಿಯಿಂದ ಮತ್ತೊಮ್ಮೆ ಜಿಲ್ಲಾ ಪ್ರವಾಸ, ಮಲೆ ಮಾದಪ್ಪನ ವರಕ್ಕಾಗಿ ಕಾಂಗ್ರೆಸ್ ನಿಂದ ಅದ್ದೂರಿ ಕಾರ್ಯಕ್ರಮ ಹೆಲಿಕಾಪ್ಟರ್ ಮೂಲಕ ಜಿಲ್ಲೆಗೆ ಬರಲಿರುವ ಇಬ್ಬರೂ ನಾಯಕರು. ದಿ. ಮಾಜಿ ಸಂಸದ ಧ್ರುವನಾರಾಯಣ್ ತವರು ಜಿಲ್ಲೆಗೆ ಕಾಲಿಡುತ್ತಿರುವ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ, ದಲಿತ ಮತಗಳು ಚದುರದಂತೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್, ಸಿಆರ್ ಪಿಎಫ್ ಹಾಗು ಜಿಲ್ಲಾ ಪೊಲೀಸ್ ವತಿಯಿಂದ ಬಿಗಿ ಭದ್ರತೆ.
https://play.google.com/store/apps/details?id=com.speed.newskannada