ಅಳಿವಿನಂಚಿನಲ್ಲಿರುವ ಹಳ್ಳಿಕಾರ್ ತಳಿಯ ಎರಡು ಬಿತ್ತನೆ ಹೋರಿಗಳನ್ನು ತುರುವೇಕೆರೆ ಶಾಸಕ 26 ಲಕ್ಷ ರೂ.ಗೆ ಖರೀದಿಸಿದ್ದಾರೆ.ತುರುವೇಕೆರೆ ಕ್ಷೇತ್ರದ ಬಿಜೆಪಿ ಶಾಸಕ ಮಸಾಲಾ ಜಯರಾಮ್ ಅಳಿವಿನಂಚಿನಲ್ಲಿರುವ ಹಳ್ಳಿಕಾರ್ ತಳಿಯ ಎರಡು ಎತ್ತುಗಳನ್ನು ಮಂಡ್ಯ ಜಿಲ್ಲೆ ಬನ್ನೂರು ಗ್ರಾಮದ ರೈತ ಕೃಷ್ಣೇಗೌಡ ಎಂಬುವರಿಂದ ಖರೀದಿಸಿದ್ದಾರೆ.ಮೂರು ವರ್ಷದ 2 ಹಲ್ಲಿನ ಬಿತ್ತನೆ ಹಳ್ಳಿಕಾರ್ ಹೊರಿಯನ್ನು ಜನವರಿ 20ರಂದು ಮಂಡ್ಯದ ಬನ್ನೂರಿನಲ್ಲಿ ಎತ್ತುಗಳಿಗೆ ಅದ್ದೂರಿ ಬಿಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿತ್ತು.ಮಸಾಲೆ ಜಯರಾಮ್ ಅವರ ಹುಟ್ಟೂರು ಅಂಕಲಕೊಪ್ಪ ಗ್ರಾಮದ ಶಾಸಕರ ತೋಟದಲ್ಲಿ ಜಾನುವಾರುಗಳು ಬಂದಿದ್ದು, ಈಗಾಗಲೇ 6.5 ಲಕ್ಷ ಬೆಲೆಯ ಅಮೃತಮಹಲ್ ತಳಿ ಜೋಡಿ ಎತ್ತುಗಳನ್ನು ಶಾಸಕ ಖರೀದಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada