ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.

 

ಮುಂಬೈ: ‘ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನವನ್ನು ಬದಲಾವಣೆ ಆಧಾರದಲ್ಲಿ, 2019ರಲ್ಲಿ ಶಿವಸೇನಾಕ್ಕೆ ನೀಡಬೇಕೆಂಬ ಭರವಸೆಯನ್ನು ಈಡೇರಿಸದೇ ಇದ್ದ ಮೇಲೆ, ಈಗ ‘ಶಿವ ಸೈನಿಕ’ನೆಂದು ಕರೆಯಲಾಗುತ್ತಿರುವ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಯಾಕೆ ಮಾಡಲಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.

ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೆ ಇದೇ ಮೊದಲ ಬಾರಿಗೆ ಶಿವಸೇನಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಠಾಕ್ರೆ, ‘ಅಮಿತ್ ಶಾ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದರೆ ಈಗ ಮಹಾರಾಷ್ಟ್ರದಲ್ಲಿ ಬಿಜೆಪಿ ಮುಖ್ಯಮಂತ್ರಿ ಇರುತ್ತಿದ್ದರು’ ಎಂದು ಠಾಕ್ರೆ ಹೇಳಿದ್ದಾರೆ.

‘ಮೊದಲ ಎರಡೂವರೆ ವರ್ಷಗಳ ಕಾಲ ಶಿವಸೇನಾದವರು ಸಿಎಂ ಆಗಿರಬೇಕು ಎಂದು ನಾನು ಅಮಿತ್‌ ಶಾ ಅವರಿಗೆ ಹೇಳಿದ್ದೆ. ಅವರು ಇದನ್ನು ಮೊದಲೇ ಮಾಡಿದ್ದರೆ, ಮಹಾ ವಿಕಾಸ್ ಆಘಾಡಿಯೇ ರಚನೆಯಾಗುತ್ತಿರಲಿಲ್ಲ’ ಎಂದು ಅವರು ತಿಳಿಸಿದರು.

ಮೆಟ್ರೊ ಕಾರ್‌ ಶೆಡ್‌ ಅನ್ನು ಕಂಜುರ್‌ಮಾರ್ಗ್‌ನಿಂದ ಆರೆ ಎಂಬಲ್ಲಿಗೆ ಸ್ಥಳಾಂತರಿಸಿರುವ ಹೊಸ ಸರ್ಕಾರದ ನಿರ್ಧಾರದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಠಾಕ್ರೆ, ‘ಬಿಜೆಪಿಯು ನನಗೆ ದ್ರೋಹ ಬಗೆದಂತೆ ಮುಂಬೈಗೆ ದ್ರೋಹ ಮಾಡಬಾರದು’ ಎಂದು ಹೇಳಿದರು. ಸರ್ಕಾರದ ಕ್ರಮ‌ವನ್ನು ಅವರು ಖಂಡಿಸಿದರು.

‘ಮೆಟ್ರೋ ಕಾರ್ ಶೆಡ್ ಯೋಜನೆಯು ಕಂಜುರ್‌ಮಾರ್ಗ್‌ನಲ್ಲೇ ನಡೆಯಲಿ. ಅದು ಆರೆಗೆ ಸ್ಥಳಾಂತರಗೊಳ್ಳಬಾರದು. ಆರೆಯನ್ನು ಮೀಸಲು ಅರಣ್ಯ ಎಂದು ಈಗಾಗಲೇ ಘೋಷಿಸಲಾಗಿದೆ. ಆ ಕಾಡಿನಲ್ಲಿ ವನ್ಯಜೀವಿಗಳ ಅಸ್ತಿತ್ವ ಇದೆ. ಕಂಜುರ್‌ಮಾರ್ಗ್‌ ಖಾಸಗಿ ಸ್ವತ್ತಲ್ಲ. ನಾನು ಪರಿಸರವಾದಿಗಳೊಂದಿಗೆ ಇದ್ದೇನೆ’ ಎಂದು ಅವರು ಹೇಳಿದರು.

ಶಿವಸೇನಾದ ಬಂಡಾಯವು ಪ್ರಜಾಪ್ರಭುತ್ವದ ಅಣಕ ಎಂದು ಉದ್ಧವ ಠಾಕ್ರೆ ಹೇಳಿದರು. ಅಲ್ಲದೆ, ಜನರ ಮತ ವ್ಯರ್ಥಗೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ಮಾಡಿದ್ದು,

Fri Jul 1 , 2022
ನವದೆಹಲಿ:ಪ್ರವಾದಿ ಕುರಿತ ಹೇಳಿಕೆ ವಿಚಾರವಾಗಿ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ಮಾಡಿದ್ದು, ಆಡಳಿತ ಪಕ್ಷ ನಾಚಿಕೆಯಿಂದ ತಲೆ ತಗ್ಗಿಸಬೇಕು ಎಂದು ಟೀಕಿಸಿದೆ. ಪ್ರವಾದಿ ವಿರುದ್ಧದ ಹೇಳಿಕೆಯ ಮೂಲಕ ದೇಶಾದ್ಯಂತ ಕೋಮು ಭಾವನೆಗಳನ್ನು ಕೆರಳಲು ಏಕಾಂಗಿ ಹೊಣೆಗಾರರಾಗಿರುವ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ಸರಿಯಾಗಿಯೇ ಕರೆದಿದೆ.. […]

Advertisement

Wordpress Social Share Plugin powered by Ultimatelysocial