ಉಕ್ರೇನ್ ಮೇಲೆ ರಷ್ಯ ಯುದ್ಧ ಸಾರಿರುವ ಹಿನ್ನೆಲೆ ಉಕ್ರೇನ್ನಲ್ಲಿ ಭಾರತದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅದರಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಕೂಡ ಸಿಕ್ಕಿಹಾಕಿಕೊಂಡಿರುವ ವಿಚಾರ ಸ್ಪಷ್ಟವಾಗಿದೆ.
ಗೋಕಾಕ್ ತಾಲೂಕಿನ ಘಟಪ್ರಭಾ ನಿವಾಸಿ ಅಮೋಘಾ ಚೌಗಲಾ, ರಾಯಬಾಗ ತಾಲೂಕಿನ ಪ್ರಿಯಾ ನಿಡಗುಂದಿ ಉಕ್ರೇನ್ನಲ್ಲಿ ಸಿಲುಕಿರೋ ವಿದ್ಯಾರ್ಥಿಗಳು. ಅಮೋಘಾ ಚೌಗಲೇ ಮತ್ತು ಪ್ರಿಯಾ ನಿಡಗುಂದಿ ನಾಳೆ ದೇಶಕ್ಕೆ ಮರುಳಲು ಟಿಕೆಟ್ ಬುಕ್ ಮಾಡಿದ್ದರು.ಅಷ್ಟರಾಗಲೇ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುತ್ತಿರುವುದರಿಂದ ಉಕ್ರೇನ್ನಲ್ಲಿಯೇ ಈ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಪೆÇೀಷಕರ ಸಂಪರ್ಕದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿದ್ದು, ಇಬ್ಬರನ್ನು ವಾಪಸ್ ತಾಯ್ನಾಡಿಕೆ ಕರೆ ತರಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada