ಬೆಳ್ತಂಗಡಿ, ಮಾ.5: ಯುದ್ದಗ್ತಸ್ಥ ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದ ಉಜಿರೆಯ ಟಿ.ಬಿ ಕ್ರಾಸ್ ನಿವಾಸಿ ದಿ.ಯಾಸೀನ್ ಮತ್ತು ಶಹನಾ ದಂಪತಿಯ ಪುತ್ರಿ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರು ಸುರುಕ್ಷಿತವಾಗಿ ಇಂದು ಬೆಳಗ್ಗೆ ಹೊಸದಿಲ್ಲಿ ತಲುಪಿದ್ದಾರೆ. ಆ ಮೂಲಕ ಕೆಲದಿನಗಳಿಂದ ಆತಂಕಿತರಾಗಿದ್ದ ಹೀನಾ ಅವರು ಹೆತ್ತವರು ನಿಟ್ಟಿಸಿರುವ ಬಿಟ್ಟಿದ್ದಾರೆ.ಖಾರ್ಕಿವ್ ನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಹೀನಾ ಫಾತಿಮಾ ಅವರು ಉಕ್ರೇನ್ ಮೇಲಿನ ರಶ್ಯ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಬಳಿಕ ಕಟ್ಟಡವೊಂದರ ಬಂಕರ್ ನಲ್ಲಿ ನೆಲೆಸಿದ್ದ ಅವರು ಉಕ್ರೇನ್ ನ ಲಸವಿನ್ ಪ್ರದೇಶಕ್ಕೆ ರೈಲಿನ ಮೂಲಕ ಸಾಗಿ ಅಲ್ಲಿಂದ ಗಡಿ ಪ್ರದೇಶಕ್ಕೆ ತೆರಳಿದ್ದರು. ಪೋಲ್ಯಾಂಡ್ ತಲುಪಿದ ಹೀನಾ ನಿನ್ನೆ ರಾತ್ರಿ ಅಲ್ಲಿಂದ ವಿಮಾನದ ಮೂಲಕ ಹೊರಟು ಇಂದು ಬೆಳಗ್ಗೆ 7 ಗಂಟೆಗೆ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ ಎಂದು ಹೀನಾ ಫಾತಿಮಾ ಅವರ ಮಾವ ಉಜಿರೆಯ ಆಬಿದ್ ಅಲಿ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.ದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಲಿರುವ ಹೀನಾ ಅಲ್ಲಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ತನ್ನ ಉಜಿರೆ ಮನೆಗೆ ಬರಲಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada