ಉಪೇಂದ್ರ ಪುತ್ರಿ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ..! – ಯುವರಾಜನಿಗೆ ಯುವರಾಣಿಯಾಕ್ತಿದ್ದಾಳೆ ಐಶ್ವರ್ಯ..

ಸ್ಯಾಂಡಲ್ಬುಡ್‌ನಲ್ಲಿ ಸ್ಟಾರ್ಸ್ಗಳ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡೋದಕ್ಕೆ ಶುರುಮಾಡಿದ್ದಾರೆ. ಕನಸಿನ ರಾಣಿ ಮಾಲಾಶ್ರಿ ಅವರ ಮಗಳು ರಾಧನಾ ರಾಮ್‌ ದರ್ಶನ್‌ ಅವರ ಸಿನಿಮಾದ ಮೂಲಕ ತೆರೆಮೇಲೆ ಬರಲು ರೆಡಿಯಾಕ್ತಿದ್ದಾರೆ. ಇನ್ನೊಂದು ಕಡೆ ಲವ್ಲೀ ಸ್ಟಾರ್‌ ಪ್ರೇಮ್‌ ಮಗಳು ಡಾಲಿ  ಧನಂಜಯ್‌ ಅವರ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಟಗರುಪಲ್ಯ “ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡೋ ತಯಾರಿಯಲ್ಲಿದ್ದಾರೆ. ಅದೇ ಲಿಸ್ಟ್ಗೆ ಈಗ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಮಗಳು ಐಶ್ವರ್ಯ ಉಪೇಂದ್ರ ಹೊಸ ಸೇರ್ಪಡೆಯಾಗ್ತಿದ್ದಾರೆ.  ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವರಾಜ್ಕುಮಾರ್‌ ಅವರ ಚೊಚ್ಚಲ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ ಅನ್ನೋ ಸುದ್ದಿ ಜೋರಾಗಿ ಕೇಳಿಬರ್ತಾ ಇದೆ.ನೋಡೋದಕ್ಕೆ ಐಶ್ವರ್ಯ ಅಮ್ಮ ಪ್ರಿಯಾಂಕಾ ಉಪೇಂದ್ರ ಅವರ ಥರಾನೇ ಬಹಳ ಸುಂದರವಾಗಿದ್ದಾರೆ. ಈಗಾಗಲೇ ಅಮ್ಮನ ಜೊತೆ “ಮಮ್ಮಿ” ಹಾಗೂ “ದೇವಕಿ” ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ. ಈ ಸುದ್ದಿಗೆ ಸಂಬಂಧಪಟ್ಟಂತೆ ಮತ್ತೊಂದು ಲೇಟೇಸ್ಟ್‌ ಅಪ್ಡೇಟ್‌ ಸಿಕ್ಕಿದೆ. ಯುವರಾಜ್ಕುಮಾರ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಚಿತ್ರಕ್ಕೆ ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನ ಮಾಡಲಿದ್ದಾರೆ. ಚಿತ್ರಕ್ಕೆ ಐಶ್ವರ್ಯ ಉಪೇಂದ್ರ ನಾಯಕಿಯಾಗಿರ್ತಾರೆ ಅನ್ನೋದು ಇಷ್ಟು ದಿನದ ಸುದ್ದಿಯಾಗಿತ್ತು. ಆದರೆ ಅಸಲಿ ಕಥೆ ಏನು ಅಂದ್ರೆ  ಈ ಚಿತ್ರದಲ್ಲಿ ಐಶ್ವರ್ಯ ಉಪೇಂದ್ರ ಯುವರಾಜ್ಕುಮಾರ್‌ಗೆ ನಾಯಕಿಯಾಗಿರುವ ಬದಲು ಅವರ ತಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಅನ್ನೋದು. ಅಷ್ಟೇ ಅಲ್ಲ ಈ ಚಿತ್ರದಲ್ಲಿ ಐಶ್ವರ್ಯ ಅವರ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಸಹ ನೀಡಲಾಗಿದೆ ಎನ್ನಲಾಗ್ತಿದೆ. ಹೊಂಬಾಳೆ ಫಿಲ್ಮ್‌ ಬ್ಯಾನರ್‌ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಇದೇ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾದ ಕೆಜಿಎಫ್‌ ಹಾಗೂ ಕಾಂತಾರ ಚಿತ್ರಗಳ ಲಿಸ್ಟ್ಗೆ ಈ ಸಿನಿಮಾ ಕೂಡ ಸೇರಬಹುದು ಅನ್ನೋ ಲೆಕ್ಕಾಚಾರ ಸಹ ಹಾಕಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರೌಡಿಗಳಿಗೆ ಕುಮ್ಮಕ್ಕು ಕೊಟ್ಟಿದ್ದೇ ಕಾಂಗ್ರೆಸ್‌ – ಆರ್‌ ಅಶೋಕ್‌ ವಾಗ್ದಾಳಿ.

Sat Dec 3 , 2022
ಬಿಜೆಪಿ ಕಾರ್ಯಕ್ರಮದಲ್ಲಿ ರೌಡಿಶೀಟರ್‌ ಸುನೀಲ ಕಾಣಿಸಕೊಂಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವಾಗಲೇ, ವಸತಿ ಸಚಿವ ವಿ.ಸೋಮಣ್ಣ ಮನೆಯಲ್ಲಿರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗ ಪ್ರತ್ಯಕ್ಷನಾಗಿದ್ದು, ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.   ಬಿಜೆಪಿಯದ್ದು ಗೂಂಡಾ ರಾಜಕಾರಣ ಹಾಗಾಗಿ ಫೈಟರ್‌ ರವಿಯನ್ನ ಬಿಜೆಪಿಗೆ  ಸೇರಿಸಿಕೊಂಡಿದ್ದಾರೆ ಎಂದು ಬಿಜೆಪಿ ಬಗ್ಗೆ ಕಾಂಗ್ರೆಸ್ಸಿಗರು ಕೇವಲವಾಗಿ ಮಾತನಾಡಿದ್ದರು. ಇದಕ್ಕೆ ಕಂದಾಯ ಸಚಿವ ಆರ್‌ ಅಶೋಕ್‌ ಗರಂ ಆಗಿದ್ದು ರೌಡಿಗಳಿಗೆ ಬಿಜೆಪಿ ಎಂದೂ ಬೆಂಬಲಿಸಿಲ್ಲ. ಫೈಟರ್‌ ರವಿ ಬಿಜೆಪಿ ಸೇರಿದ್ದು ನಮ್ಮ ಗಮನಕ್ಕೆ […]

Advertisement

Wordpress Social Share Plugin powered by Ultimatelysocial