ಸಿಂಧೂರ, ತಾಳಿ ಧರಿಸಿದ ಊರ್ವಶಿ ರೌಟೇಲಾ

 

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹಾಗೂ ಕ್ರಿಕೆಟಿಗ ರಿಷಬ್ ಪಂತ್ ನಡುವಿನ ಕೋಳಿ ಜಗಳ ವರ್ಲ್ಡ್‌ ಫೇಮಸ್ ಆಗಿರೋ ಟೈಮಲ್ಲೇ ಊರ್ವಶಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಆಸ್ಟ್ರೇಲಿಯಾದಲ್ಲಿ ಇರುವ ಊರ್ವಶಿ ರೌಟೇಲಾ ತಮ್ಮ ವಿಭಿನ್ನವಾದ ಫೋಟೋ ಒಂದನ್ನು ಇನ್‌ ಸ್ಟಾ ಗ್ರಾಂನಲ್ಲಿ ಶೇರ್ ಮಾಡಿದ್ಧಾರೆ.ಕೊರಳಲ್ಲಿ ಮಂಗಳ ಸೂತ್ರ, ಹಣೆಯಲ್ಲಿ ಸಿಂಧೂರ ಧರಿಸಿ, ಸೀರೆ ಉಟ್ಟು ಪಕ್ಕಾ ಗೃಹಿಣಿಯಂತೆ ಕಂಗೊಳಿಸುತ್ತಿರುವ ಊರ್ವಶಿ ರೌಟೇಲಾ, ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಂದ ಹಾಗೆ ಈ ಫೋಟೋವನ್ನು ಊರ್ವಶಿ ರೌಟೇಲಾ ಇನ್‌ಸ್ಟಾ ಗ್ರಾಂನಲ್ಲಿ ಶೇರ್ ಮಾಡಿದ್ದು ಕರ್ವಾ ಚೌತ್‌ಗೆ ಶುಭ ಕೋರಲು.. ಆದ್ರೆ, ಇದೀಗ ಈ ಫೋಟೋ ಊರ್ವಶಿ ರೌಟೇಲಾಗೆ ತಿರುಗು ಬಾಣ ಆಗಿದೆ..! ಯಾಕಂದ್ರೆ ನೆಟ್ಟಿಗರು ಊರ್ವಶಿ ರೌಟೇಲಾಗೆ ಟಾಂಗ್ ಕೊಡ್ತಿದ್ಧಾರೆ..! ಅಕ್ಕಾ ರಿಷಬ್ ಪಂತ್ ತಂಟೆಗೆ ಹೋಗಬೇಡ ಪ್ಲೀಸ್ ಅಂತಾ ಕ್ರಿಕೆಟಿಗನ ಪರ ನೆಟ್ಟಿಗರು ಬ್ಯಾಟ್ ಬೀಸ್ತಿದ್ದಾರೆಕರ್ವಾ ಚೌತ್ ಹಬ್ಬವು ಉತ್ತರ ಭಾರತೀಯ ಗೃಹಿಣಿಯರ ಪಾಲಿಗೆ ಅತ್ಯಂತ ಪವಿತ್ರ ದಿನ. ತನ್ನ ಪತಿಯ ದೀರ್ಘಾಯುಷ್ಯ, ಆರೋಗ್ಯ, ಐಶ್ವರ್ಯ ವೃದ್ದಿಗೆ ಪ್ರಾರ್ಥಿಸಿ ದಿನವಿಡೀ ಉಪವಾಸವಿದ್ದು ಸಂಜೆ ಚಂದ್ರ ದರ್ಶನದೊಂದಿಗೆ ಗಂಡನ ಮುಖ ನೋಡಿ ಉಪವಾಸ ಮುಗಿಸುವ ಈ ಹಬ್ಬಕ್ಕೆ ಊರ್ವಶಿ ರೌಟೇಲಾ ಶುಭ ಕೋರಿದ್ದರು. ಅದೂ ಕೂಡಾ ಸೀರೆ, ತಾಳಿ ಹಾಗೂ ಸಿಂಧೂರದ ಪಾವಿತ್ರ್ಯತೆಯನ್ನು ಸಾರುವ ಸಾಲುಗಳನ್ನು ಬರೆದಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಐಕ್ಯತಾ ಸಮಾವೇಶವನ್ನು ರಾಜ್ಯ ಕಾಂಗ್ರೆಸ್ ಪಕ್ಷ ಚಿತ್ರದುರ್ಗದಲ್ಲಿ ಹಮ್ಮಿಕೊಂಡಿತ್ತು.

Mon Jan 9 , 2023
ಚಿತ್ರದುರ್ಗ, ಜನವರಿ 9: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಐಕ್ಯತಾ ಸಮಾವೇಶವನ್ನು ರಾಜ್ಯ ಕಾಂಗ್ರೆಸ್ ಪಕ್ಷ ಚಿತ್ರದುರ್ಗದಲ್ಲಿ ಹಮ್ಮಿಕೊಂಡಿತ್ತು. ಈ ಒಂದು ಸಮಾವೇಶದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಎಸ್ಸಿ ಎಸ್ಟಿ ಸಮುದಾಯಗಳಿಗೆ ಭರ್ಜರಿ ಯೋಜನೆಗಳನ್ನು ಜಾರಿಗೆ ತರಲು ಕಾಂಗ್ರೆಸ್ ಮುಂದಾಗಿದೆ.ಈ ಹತ್ತು ಘೋಷಣೆಗಳನ್ನು ಈಡೇರಿಸಲಾಗುತ್ತದೆ ಎಂದು ಕಾಂಗ್ರೆಸ್ ಘೋಷಣೆಗಳನ್ನು ಘೋಷಿಸಿದೆ.1). ಎಸ್ ಸಿ, ಎಸ್ ಟಿ ಜನಾಂಗದವರಾದ ನಮಗೆ ನೀಡುವ ಮೀಸಲಾತಿ ಭಿಕ್ಷೆ ಅಲ್ಲ. ಅದು […]

Advertisement

Wordpress Social Share Plugin powered by Ultimatelysocial