ವಸುಂಧರಾ ಫಿಲಿಯೋಜಾ ಹಿರಿಯ ಇತಿಹಾಸಜ್ಞೆ

ಹಿರಿಯರಾದ ಡಾ. ವಸುಂಧರಾ ಫಿಲಿಯೋಜಾ ಹಿರಿಯ ಇತಿಹಾಸಜ್ಞೆ ಮತ್ತು ಸಂಶೋಧಕಿ. ಇವರು ಅಕೆಡೆಮಿಕ್ ವಲಯದಿಂದ ಹೊರಗಿದ್ದು, ಸ್ವತಂತ್ರವಾಗಿ ಸಂಶೋಧನೆಗಳನ್ನು ನಡೆಸಿ, ತಮ್ಮದೇ ಛಾಪನ್ನು ಮೂಡಿಸಿದವರು. ಫ್ರಾನ್ಸ್ ದೇಶದಲ್ಲಿ ವ್ಯಾಪಕವಾದ ಸಂಸ್ಕೃತ ಬೆಳವಣಿಗೆಗೆ ಅಪಾರ ಕೆಲಸ ಮಾಡುತ್ತ ಬಂದಿದ್ದಾರೆ.
ವಸುಂಧರಾ 1940ರ ಜನವರಿ 1ರಂದು ಜನಿಸಿದರು. ತಂದೆ ಪಂಡಿತ ಚನ್ನಬಸಪ್ಪ ಯಲ್ಲಪ್ಪ ಕವಲಿ ಅವರಿಗೆ ಏಳು ಜನ ಮಕ್ಕಳು. ಆ ಮಕ್ಕಳ ಮಾಲೆಯಲ್ಲಿ ಇವರು ಐದನೆಯವರು. ಅದನ್ನೇ ಎನ್ಕೆಯವರು ಸಂಗೀತದಲ್ಲಿಯ ಪಂಚಮ ಸ್ವರ-ಸ್ಥಿರ ಸ್ವರ ಎಂದು ಒಮ್ಮೆ ಇವರಿಗೆ ಪತ್ರದಲ್ಲಿ ಬರೆದಿದ್ದರು. ಇವರ ತಂದೆ ಗಂಡುಮಕ್ಕಳನ್ನು ಶಾಲೆಗೆ ಕಳಿಸಿದ ಹಾಗೆ ಹೆಣ್ಣುಮಕ್ಕಳನ್ನೂ ಓದಿಸಿದರು. ಕನ್ನಡ ಶಾಲೆಯಲ್ಲಿ ಎಲ್ಲವನ್ನೂ ಕನ್ನಡದಲ್ಲಿಯೇ ಕಲಿಯುವ ಸೌಭಾಗ್ಯ ಇವರಿಗೆ ದೊರೆಯಿತು.
ವಸುಂಧರ ಅವರಿಗೆ ಸಾಕಷ್ಟು ನಂಬರು ಬರುತ್ತಿರಲಿಲ್ಲವಾದ್ದರಿಂದ ಮನೆಯಲ್ಲಿ ಧಡ್ಡಿ ಎಂಬ ಬಿರುದು ಇತ್ತಂತೆ. ಮುಂದೆ ಇವರು ಮಾಡಿದ ಕೆಲಸ ಲೋಕವೇ ಸಂಭ್ರಮಿಸುವಷ್ಟು. ಇವರು ಎಸ್.ಎಸ್.ಎಲ್.ಸಿ. ಪಾಸಾದಾಗ ತಂದೆ ಎಲ್ಲರಂತೆ ಕಾಲೇಜಿಗೆ ಹೋಗು ಆರ್ಟ್ಸ್ ಓದು ಎಂದರು. ಕಾಲೇಜಿನಲ್ಲಿ ಮೊದಲ ವರ್ಷ ಆದ ಮೇಲೆ ಅಂದಿನ ಪದ್ಧತಿಯಲ್ಲಿ ಇನ್ನೇನು ಇಂಟರ್ ಆರ್ಟ್ಸ್ಗೆ ಕಾಲೇಜು ಪ್ರಾರಂಭವಾಗಬೇಕಾದ ಸಮಯ ಇವರ ಅಣ್ಣ ವಸಂತ ಕವಲಿ ಮುಂಬೈಯಲ್ಲಿದ್ದರು. ಅವರಿಗಿದ್ದ ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆಯ ಕಾರಣಕ್ಕೆಂದು ಇವರು ಮುಂಬೈಗೆ ಹೋಗಿ ಅಲ್ಲಿಯೇ ಉಳಿಯಬೇಕಾಯಿತು. ವಡಾಲಾ ಮಾತುಂಗಾದಲ್ಲಿರುವ ಖಾಲ್ಸಾ ಕಾಲೇಜು ಸೇರಿದರು. ಇವರ ಅಭ್ಯಾಸ ಸರಿಯಾಗಿಯೇ ನಡೆದಿತ್ತು. ಅಣ್ಣನ ಮನೆಯಲ್ಲಿ ಅತ್ತಿಗೆಯ ಉಪಸ್ಥಿತಿಯಲ್ಲಿ ಇರುವುದೇ ಕಠಿಣವಾದಾಗ, ಎಲ್ಲ ಸಾಮಾನು ಹೊತ್ತುಕೊಂಡು ಧಾರವಾಡಕ್ಕೆ ಅಪ್ಪ-ಅವ್ವನ ಹತ್ತಿರ ಬಂದರು. 1960ರ ಮೇ ತಿಂಗಳಿನಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ಕಾಲೇಜಿನಲ್ಲಿ ಮತ್ತೆ ಸೀನಿಯರ್ ಬಿ.ಎ. ಪ್ರಾರಂಭಿಸಿದರು. ಇತಿಹಾಸದಲ್ಲಿ ಬ್ರಿಟಿಷ್ ಕಾನ್ಸ್ಟಿಟ್ಯೂಷನ್, ವರ್ಲ್ಡ್ ಹಿಸ್ಟರಿ, ಇಂಡಿಯನ್ ಹಿಸ್ಟರಿ, ಕರ್ನಾಟಕ ಹಿಸ್ಟರಿ, ಇತ್ಯಾದಿ ಇತಿಹಾಸದಲ್ಲಿ ಆರು ಪೇಪರುಗಳು ಇರುತ್ತಿದ್ದವು. ಈ ಸಮಯದಲ್ಲೇ ಪ್ರೊ. ಜಿ.ಎಸ್. ದೀಕ್ಷಿತ್ ಗುರುಗಳ ಪರಿಚಯವಾಯಿತು. ದೀಕ್ಷಿತರ ಪ್ರೋತ್ಸಾಹದಿಂದ 1961ರಲ್ಲಿ ಬಿ.ಎ. ಮುಗಿಸಿ ಇತಿಹಾಸದಲ್ಲೇ ಎಂ.ಎ. ಇತಿಹಾಸಕ್ಕೆ ಸೇರಿದರು. ಆಗ ಇವರಿಗೆ ಬಿ.ಎ. ಸಾಲೆತೊರೆ, ಜಿ.ಎಸ್. ದೀಕ್ಷಿತ್, ಪಿ.ಬಿ. ದೇಸಾಯಿಯವರಂಥ ಘಟಾನುಘಟಿಗಳಾದ ಅಧ್ಯಾಪಕರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೃಪಾಕರ ಸೇನಾನಿ ಒಂದೇ ಹೆಸರಿನಂತಿರುವ ಮಹಾನ್ ಸಾಧನೆ ಮಾಡಿರುವ ಜೋಡಿ

Tue Jan 3 , 2023
ಕೃಪಾಕರ – ಸೇನಾನಿ ಒಂದೇ ಹೆಸರಿನಂತಿರುವ ಮಹಾನ್ ಸಾಧನೆ ಮಾಡಿರುವ ಜೋಡಿ. ಈ ಜೋಡಿ ಶ್ರೇಷ್ಠ ಮಟ್ಟದ ವನ್ಯಜೀವಿಗಳ ಕುರಿತಾದ ಚಿತ್ರಗಳಿಗಾಗಿ ವಿಶ್ವಮಾನ್ಯತೆ ಗಳಿಸಿರುವುದರ ಜೊತೆಗೆ, ಪರಿಸರದ ಕಾಳಜಿಯ ಕುರಿತಾಗಿ ಮಹತ್ವದ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿರುವವರು. ವೀರಪ್ಪನ್ ಇಂದ ಅಪಹೃತರಾಗಿದ್ದ ಈ ಜೋಡಿ ತಮ್ಮ ಸ್ನೇಹಗುಣದಿಂದ ಆತನಿಂದಲೂ ಆಪ್ತ ಬೀಳ್ಕೊಡುಗೆ ಪಡೆದು ಬಂದು ನಿರಂತರವಾಗಿ ವನ್ಯಜೀವನದ ಕುರಿತಾದ ಕಾಳಜಿಗಳಲ್ಲಿಸಾಗುತ್ತಿರುವವರು.ಬಿ. ಎಸ್. ಕೃಪಾಕರ 1956ರ ಜುಲೈ 7ರಂದು ಜನಿಸಿದರು. ಅವರು ಮೈಸೂರು […]

Advertisement

Wordpress Social Share Plugin powered by Ultimatelysocial