ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ತರಕಾರಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈರುಳ್ಳಿ, ಟೊಮೆಟೋ ಸೇರಿದಂತೆ ಹಲವು ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ತರಕಾರಿಗಳ ಬೆಲೆಯಲ್ಲಿ ಭಾರೀ ವ್ಯತ್ಯಾಸ ಕಂಡು ಬಂದಿದೆ . ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದ ನಡುವೆ ನಿಂಬೆಗೆ ಬೇಡಿಕೆಯೂ ಗಣನೀಯವಾಗಿ ಹೆಚ್ಚಿದ್ದು , ಕೆಲವೂ ರಾಜ್ಯಗಳಲ್ಲಿ ನಿಂಬೆಹಣ್ಣಿನ ಬೆಲೆಯೂ ಕೆ . ಜಿಗೆ 300-400 ರೂಪಾಯಿ ದಾಟಿದೆ . ಹಲವೆಡೆ 10-15 ರೂಪಾಯಿಗೆ ಒಂದು ನಿಂಬೆಹಣ್ಣು ಸಿಗುವ ಪರಿಸ್ಥಿತಿ ನಿರ್ಮಾಣವಾಗಿದೆ . ಡೀಸೆಲ್ – ಪೆಟ್ರೋಲ್ ಬೆಲೆಯಲ್ಲಿನ ಹೆಚ್ಚಳವೇ ಈ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ .
ಇಂದು ಟೊಮೆಟೋ ಬೆಲೆ ಕೆಜಿ ಗೆ 35 ರೂ.
ಇದ್ದರೆ, ಈರುಳ್ಳಿ 40 ರೂ. ನುಗ್ಗೇಕಾಯಿ 50 ರೂ. ಮೂಲಂಗಿ 28-30 ರೂ. ಬೆಳ್ಳುಳ್ಳಿ 90-95 ರೂ. ಬದನೆಕಾಯಿ 25 ರೂ. ಬೀಟ್ ರೂಟ್ 25 ರೂ. ಹಾಗಲಕಾಯಿ 40-45 ರೂ. ಸೌತೆ ಕಾಯಿ 30 ರೂ. ಹಸಿಮೆಣಸಿನ ಕಾಯಿ 65 ರೂ. ದಪ್ಪಮೆಣಸಿನ ಕಾಯಿ 78 ರೂ. ಇದ್ದರೆ ಕೊತ್ತಂಬರಿ ಸೊಪ್ಪು 60 ರೂ.ಕರಿಬೇವು 85 ರೂ.ಗೆ ಮಾರಾಟವಾಗುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada