ಹಿಜಾಬ್ ವಿವಾದ ಕುರಿತಂತೆ ನಡೆಯುತ್ತಿರುವಂತ ವಿಚಾರಣೆಯ ಸಂಬಂಧದ ಅರ್ಜಿಗೆ, ರಿಟ್ ಅರ್ಜಿಗೆ ಹೈಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸಿದೆ.

 

ಬೆಂಗಳೂರು: ರಾಜ್ಯ ಸರ್ಕಾರದಿಂದ  ಇಂದು ಹಿಜಾಬ್ ವಿವಾದ   ಕುರಿತಂತೆ ನಡೆಯುತ್ತಿರುವಂತ ವಿಚಾರಣೆಯ ಸಂಬಂಧದ ಅರ್ಜಿಗೆ, ರಿಟ್ ಅರ್ಜಿಗೆ ಹೈಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸಿದೆ.ಈ ಮೂಲಕ ಸಮವಸ್ತ್ರ  ರೂಪಿಸೋ ಅಧಿಕಾರ ಸರ್ಕಾರಕ್ಕೆ ಇದೆ ಎಂಬುದಾಗಿ ತಿಳಸಿದೆ.ಈ ಕುರಿತಂತೆ ಸರ್ಕಾರದಿಂದ ರಿಟ್ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಯಾಗಿದೆ. ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಪಾಲಿಸಲಾಗುತ್ತಿತ್ತು. ಪ್ರವೇಶಕ್ಕೂ ಮೊದಲು ವಿದ್ಯಾರ್ಥಿಗಳಿಗೆ ಇದರ ಅರಿವಿತ್ತು ಎಂಬುದಾಗಿ ತಿಳಿಸಿದೆ.ಡಿಸೆಂಬರ್ 2021ರವರೆಗೆ ಹಿಜಾಬ್ ಬಗ್ಗೆ ಯಾವುದೇ ಗೊಂದಲ ಇರಲಿಲ್ಲ. ಈ ಬಳಿಕ ಕೆಲವರು ಹಿಜಾಬ್ ಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲಿಯವರೆಗೆ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿತ್ತು ಎಂದು ತಿಳಿಸಿದೆ.ರಾಜ್ಯ ಸರ್ಕಾರ ಯಾವುದೇ ಧರ್ಮ, ಜಾತಿಯ ಪರ-ವಿರೋಧವಿಲ್ಲ. ಶಾಲಾ ಆವರಣದಲ್ಲಿ ಸಮವಸ್ತ್ರ, ಶಿಸ್ತು ಪಾಲನೆ ಕಾಪಾಡಬೇಕಿದೆ. ಸಹೋದರತ್ವ ಬಳೆಯಬೇಕಾದ್ರೇ ಸಮವಸ್ತ್ರ ಅಗತ್ಯ. ಧರ್ಮ ಆಧರಿಸಿದ ಸಮವಸ್ತ್ರ ಮಕ್ಕಳ ಭೌದ್ಧಿಕತೆಯ ಮೇಲೆ ಅಡ್ಡಿಯಾಗಲಿದೆ. ಕಾಲೇಜುಗಳಲ್ಲಿ ಗುಂಪುಗಾರಿಕೆಗೆ ಅವಕಾಶವಾಗುತ್ತದೆ. ಕೆಲವು ದೇಶಗಳ ಶಾಲಾ-ಕಾಲೇಜಿನಲ್ಲಿ ಹಿಜಾಬ್ ನಿಷೇಧವಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧರಿಸೋದಕ್ಕೂ ನಿಷೇಧವಿದೆ ಎಂದು ಅರ್ಜಿಯಲ್ಲಿ ಹೈಕೋರ್ಟ್ ನ್ಯಾಯಪೀಠಕ್ಕೆ ಮನವರಿಕೆ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ ನಿಷೇಧ: ನ್ಯಾಯಾಲಯದ ಆದೇಶವನ್ನು ಪಾಲಿಸುತ್ತೇನೆ ಎಂದು ಪ್ರತಿಭಟನಾನಿರತ ಮುಸ್ಲಿಂ ಬಾಲಕಿ ಮುಸ್ಕಾನ್ ಹೇಳಿದ್ದಾರೆ;

Wed Feb 9 , 2022
ಬುಧವಾರ ಕಾಲೇಜಿನ ಆವರಣದಲ್ಲಿ ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗುತ್ತಿದ್ದ ಜನರ ಆಕ್ರೋಶಕ್ಕೆ ಗುರಿಯಾದ ಬುರ್ಕಾಧಾರಿ ವಿದ್ಯಾರ್ಥಿ ಮುಸ್ಕಾನ್ ಖಾನ್, ಹಿಜಾಬ್ ಧರಿಸುವ ಕುರಿತು ನ್ಯಾಯಾಲಯದ ಆದೇಶವನ್ನು ಪಾಲಿಸುವುದಾಗಿ ಬುಧವಾರ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಪಿಇಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿ ಮುಸ್ಕಾನ್ ಬುರ್ಕಾ ಧರಿಸಿದ್ದಕ್ಕಾಗಿ ಕಾಲೇಜು ಆವರಣದಲ್ಲಿ ನೆರೆದಿದ್ದ ಜನರಿಂದ ಥಳಿತ. ನೂರಾರು ವಿದ್ಯಾರ್ಥಿಗಳು “ಜೈ ಶ್ರೀ ರಾಮ್” ಎಂದು ಘೋಷಣೆಗಳನ್ನು ಕೂಗುತ್ತಿದ್ದಾಗಲೂ ಅವರು “ಅಲ್ಲಾ-ಹು-ಅಕ್ಬರ್” ಎಂಬ […]

Advertisement

Wordpress Social Share Plugin powered by Ultimatelysocial