ಬೆಂಗಳೂರು: ರಾಜ್ಯ ಸರ್ಕಾರದಿಂದ ಇಂದು ಹಿಜಾಬ್ ವಿವಾದ ಕುರಿತಂತೆ ನಡೆಯುತ್ತಿರುವಂತ ವಿಚಾರಣೆಯ ಸಂಬಂಧದ ಅರ್ಜಿಗೆ, ರಿಟ್ ಅರ್ಜಿಗೆ ಹೈಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸಿದೆ.ಈ ಮೂಲಕ ಸಮವಸ್ತ್ರ ರೂಪಿಸೋ ಅಧಿಕಾರ ಸರ್ಕಾರಕ್ಕೆ ಇದೆ ಎಂಬುದಾಗಿ ತಿಳಸಿದೆ.ಈ ಕುರಿತಂತೆ ಸರ್ಕಾರದಿಂದ ರಿಟ್ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಯಾಗಿದೆ. ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಪಾಲಿಸಲಾಗುತ್ತಿತ್ತು. ಪ್ರವೇಶಕ್ಕೂ ಮೊದಲು ವಿದ್ಯಾರ್ಥಿಗಳಿಗೆ ಇದರ ಅರಿವಿತ್ತು ಎಂಬುದಾಗಿ ತಿಳಿಸಿದೆ.ಡಿಸೆಂಬರ್ 2021ರವರೆಗೆ ಹಿಜಾಬ್ ಬಗ್ಗೆ ಯಾವುದೇ ಗೊಂದಲ ಇರಲಿಲ್ಲ. ಈ ಬಳಿಕ ಕೆಲವರು ಹಿಜಾಬ್ ಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲಿಯವರೆಗೆ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿತ್ತು ಎಂದು ತಿಳಿಸಿದೆ.ರಾಜ್ಯ ಸರ್ಕಾರ ಯಾವುದೇ ಧರ್ಮ, ಜಾತಿಯ ಪರ-ವಿರೋಧವಿಲ್ಲ. ಶಾಲಾ ಆವರಣದಲ್ಲಿ ಸಮವಸ್ತ್ರ, ಶಿಸ್ತು ಪಾಲನೆ ಕಾಪಾಡಬೇಕಿದೆ. ಸಹೋದರತ್ವ ಬಳೆಯಬೇಕಾದ್ರೇ ಸಮವಸ್ತ್ರ ಅಗತ್ಯ. ಧರ್ಮ ಆಧರಿಸಿದ ಸಮವಸ್ತ್ರ ಮಕ್ಕಳ ಭೌದ್ಧಿಕತೆಯ ಮೇಲೆ ಅಡ್ಡಿಯಾಗಲಿದೆ. ಕಾಲೇಜುಗಳಲ್ಲಿ ಗುಂಪುಗಾರಿಕೆಗೆ ಅವಕಾಶವಾಗುತ್ತದೆ. ಕೆಲವು ದೇಶಗಳ ಶಾಲಾ-ಕಾಲೇಜಿನಲ್ಲಿ ಹಿಜಾಬ್ ನಿಷೇಧವಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧರಿಸೋದಕ್ಕೂ ನಿಷೇಧವಿದೆ ಎಂದು ಅರ್ಜಿಯಲ್ಲಿ ಹೈಕೋರ್ಟ್ ನ್ಯಾಯಪೀಠಕ್ಕೆ ಮನವರಿಕೆ ಮಾಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada