ಚಿತ್ರದ ಚಿತ್ರೀಕರಣ ಪೂರ್ಣ ಗೊಂಡಿದ್ದು, ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಅಂತಿಮ ಕೆಲಸದಲ್ಲಿ ಬಿಝಿಯಾಗಿದೆ.
ಇನ್ನೊಂದು ವಿಶೇಷವೆಂದರೆ, ಕ್ರೇಜಿಸ್ಟಾರ್ ರವಿಚಂದ್ರನ್ ಇದೇ ಮೊದಲ ಬಾರಿಗೆ “ಅಂದೊಂದಿತ್ತು ಕಾಲ’ ಸಿನಿಮಾದಲ್ಲಿ ನಿರೂಪಕನಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಿನಿಮಾದಲ್ಲಿ ನಾಯಕನ ಜರ್ನಿ ಯನ್ನು ಮೆಲುಕು ಹಾಕುವಂತ ದೃಶ್ಯಗಳಿದ್ದು, ರವಿಚಂದ್ರನ್ ನಿರೂಪಕನಾಗಿರುವ ಸಂದರ್ಶನದಲ್ಲಿ ನಾಯಕ ತನ್ನ ಹಿನ್ನೆಲೆಯನ್ನು ಹೇಳುತ್ತಾನೆ. ಇದೇ ಮೊದಲ ಬಾರಿಗೆ ರವಿ ಚಂದ್ರನ್ ಅವರು ತೆರೆಮೇಲೆ ಕೂಡ ರವಿಚಂದ್ರನ್ ಆಗಿಯೇ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಚಿತ್ರತಂಡ ನೀಡುವ ಮಾಹಿತಿ.
“ಅಂದೊಂದಿತ್ತು ಕಾಲ’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ವಿನಯ್, ಅದಿತಿ ಮತ್ತು ರವಿ ಚಂದ್ರನ್ ಅವರ ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು, ಇದು ಸಿನಿಮಾದ ಹೈಲೈಟ್ಸ್ಗಳಲ್ಲಿ ಒಂದು ಎನ್ನುವುದು ಚಿತ್ರದ ನಿರ್ದೇ ಶಕ ಕೀರ್ತಿ ಮಾತು. ಅಂದಹಾಗೆ ಎಲ್ಲ ಅಂದುಕೊಂಡಂತೆ ನಡೆದರೆ, ಜುಲೈ ವೇಳೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: