ವಿನಯ್‌ ರಾಜಕುಮಾರ್‌, ಅದಿತಿ ಪ್ರಭುದೇವ “ಅಂದೊಂದಿತ್ತು ಕಾಲ’

 

ಚಿತ್ರದ ಚಿತ್ರೀಕರಣ ಪೂರ್ಣ ಗೊಂಡಿದ್ದು, ಸದ್ಯ ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ ಅಂತಿಮ ಕೆಲಸದಲ್ಲಿ ಬಿಝಿಯಾಗಿದೆ.

ಇನ್ನೊಂದು ವಿಶೇಷವೆಂದರೆ, ಕ್ರೇಜಿಸ್ಟಾರ್‌ ರವಿಚಂದ್ರನ್‌ ಇದೇ ಮೊದಲ ಬಾರಿಗೆ “ಅಂದೊಂದಿತ್ತು ಕಾಲ’ ಸಿನಿಮಾದಲ್ಲಿ ನಿರೂಪಕನಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಿನಿಮಾದಲ್ಲಿ ನಾಯಕನ ಜರ್ನಿ ಯನ್ನು ಮೆಲುಕು ಹಾಕುವಂತ ದೃಶ್ಯಗಳಿದ್ದು, ರವಿಚಂದ್ರನ್‌ ನಿರೂಪಕನಾಗಿರುವ ಸಂದರ್ಶನದಲ್ಲಿ ನಾಯಕ ತನ್ನ ಹಿನ್ನೆಲೆಯನ್ನು ಹೇಳುತ್ತಾನೆ. ಇದೇ ಮೊದಲ ಬಾರಿಗೆ ರವಿ ಚಂದ್ರನ್‌ ಅವರು ತೆರೆಮೇಲೆ ಕೂಡ ರವಿಚಂದ್ರನ್‌ ಆಗಿಯೇ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಚಿತ್ರತಂಡ ನೀಡುವ ಮಾಹಿತಿ.

“ಅಂದೊಂದಿತ್ತು ಕಾಲ’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ವಿನಯ್‌, ಅದಿತಿ ಮತ್ತು ರವಿ ಚಂದ್ರನ್‌ ಅವರ ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು, ಇದು ಸಿನಿಮಾದ ಹೈಲೈಟ್ಸ್‌ಗಳಲ್ಲಿ ಒಂದು ಎನ್ನುವುದು ಚಿತ್ರದ ನಿರ್ದೇ ಶಕ ಕೀರ್ತಿ ಮಾತು. ಅಂದಹಾಗೆ ಎಲ್ಲ ಅಂದುಕೊಂಡಂತೆ ನಡೆದರೆ, ಜುಲೈ ವೇಳೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಯಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿಕೆ!

Thu Apr 28 , 2022
ಸಿಎಂ ವರಿಷ್ಠರ ಭೇಟಿ ಬಳಿಕ ಸಂಪುಟ ವಿಸ್ತರಣೆಯೋ ಪುನರ್ರಚನೆಯೋ ಅನ್ನೋದು ಗೊತ್ತಾಗಲಿದೆ ಕಾರಜೋಳ, ಜಲಸಂಪನ್ಮೂಲ, ಜಿಲ್ಲಾ ಉಸ್ತುವಾರಿ ಸಚಿವರು ನಾಳೆ ಸಿಎಂ ರಾಷ್ಟ್ರೀಯ ವರಿಷ್ಠರು ಜೊತೆಗೆ ಚರ್ಚೆ ಮಾಡಿ ಬರ್ತಾರೆ. ವರಿಷ್ಠರ ಜೊತೆಗೆ ಚರ್ಚೆ ಬಳಿಕ ಏನ್ ನಿರ್ಣಯ ತೆಗೆದುಕೊಳ್ಳುತ್ತಾರೆ ನೋಡೋಣ ಮಂತ್ರಿಮಂಡಳ ಪುನರ ರಚನೆ ಆಗಿರಬಹುದು ಮಂತ್ರಿಮಂಡಳ ವಿಸ್ತರಣೆ ಆಗಿರಬಹುದು ಅದು ಮುಖ್ಯಮಂತ್ರಿ ಪರಮಾಧಿಕಾರವನ್ನ ಸಿಎಂ ಚಲಾಯಿಸುತ್ತಾರೆ. ಐದು ಜನರಿಗೆ ಡಿಸಿಎಂ ಹುದ್ದೆ ನೀಡುವ ವಿಚಾರ ಡಿಸಿಎಂ ಹುದ್ದೆ […]

Advertisement

Wordpress Social Share Plugin powered by Ultimatelysocial