ಆತ್ಮೀಯರಾದ ವಿವೇಕಾನಂದ ಕಾಮತ್ ಕತೆ ಕಾದಂಬರಿಗಳ ಲೋಕದಲ್ಲಿ ಅಗಾಧ ಕೆಲಸ ಮಾಡುತ್ತಾ ಬಂದಿದ್ದಾರೆ. ಇಂದು ಅವರ ಜನ್ಮದಿನ.
ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಕಾಮತ್ 1976ರ ಜನವರಿ 21ರಂದು ಜನಿಸಿದರು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮ ಪದವಿ ಪಡೆದ ಕಾಮತ್ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ.
1994ರಲ್ಲಿ ಬರವಣಿಗೆ ಆರಂಭಿಸಿದ ವಿವೇಕಾನಂದ ಕಾಮತ್ 100ಕ್ಕೂ ಹೆಚ್ಚು ಕತೆ, 40 ಕಾದಂಬರಿಗಳು ಹಾಗೂ 20 ಮಿನಿ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಪ್ರಕಟಿಸಿದ್ದಾರೆ. ‘ಸುಧಾ’ ವಾರಪತ್ರಿಕೆಯಲ್ಲಿ ’ಅತಿಕ್ರಮಣ’ ’ನೆಲಮುಗಿಲು’, ‘ಅಜ್ಞಾತ’, ಸ್ವೀಕಾರ’ ಕಾದಂಬರಿಗಳು ಪ್ರಕಟವಾಗಿವೆ. ಸುಧಾದಲ್ಲಿ ಅವರ ಎರಡು ಫೋಟೊ ಕಾಮಿಕ್ಸ್ ಮತ್ತು ಅನೇಕ ಕಥೆಗಳೂ ಪ್ರಕಟವಾಗಿವೆ. ಪ್ರಸಕ್ತದಲ್ಲಿ ಪ್ರಕಟವಾಗುತ್ತಿರುವ ‘ವ್ಯತಿರಿಕ್ತ’ ಸೇರಿದಂತೆ ತರಂಗ’ದಲ್ಲಿ ನಾಲ್ಕು, ‘ಕರ್ಮವೀರ’ದಲ್ಲಿ ನಾಲ್ಕು, ‘ಮಂಗಳ’ದಲ್ಲಿ ಎಂಟು ಧಾರಾವಾಹಿಗಳು ಪ್ರಕಟಗೊಂಡಿವೆ. ಇದಲ್ಲದೆ ಎಲ್ಲ ತರಹದ ಇನ್ಜಿತರ ಪ್ರಮುಖ ನಿಯತಕಾಲಿಕಗಳಲ್ಲೂ ಇವರ ಕತೆ, ಕಾದಂಬರಿಗಳು ಮೂಡಿಬಂದಿವೆ.
ವಿವೇಕಾನಂದ ಕಾಮತ್ ಅವರ ‘ಬೇಟೆ’ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಾರಿಗೆ ಸಂಸ್ಥೆ ನೀಡುವ ಅರಳು ಪ್ರಶಸ್ತಿ(2010), ‘ದೂರ ದಾರಿಯ ತೀರ’ ಕಾದಂಬರಿಗೆ ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆ ನೀಡುವ ‘ಲೇಖಿಕಾಶ್ರೀ’ ಪ್ರಶಸ್ತಿ (2011) ಮುಂತಾದ ಗೌರವಗಳು ಸಂದಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: