ಪತ್ನಿ ಕೊಂದು ಶವದ ಜೊತೆ ರಾತ್ರಿ ಕಳೆದ 3ನೇ ಗಂಡ!

 

ತ್ತೀಚೆಗೆ ಗಾಜಿಯಾಬಾದ್​ನ ಕಾಶ್ಕ್ಷಿರಾಮ್​ ಕಾಲೋನಿ ಯಲ್ಲಿ ಭವ್ಯ ಶರ್ಮಾ ಎಂಬ ಮಹಿಳೆಯ ಕೊಲೆಗೆ ಸಂಬಂಧಿಸಿದಂತೆ ಆಕೆಯ ಮೂರನೇ ಗಂಡ ವಿನೋದ್‌ ಶರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ.ಯಾವ ಉದ್ದೇಶಕ್ಕಾಗಿ ಈ ಕೊಲೆ ಮಾಡಲಾಯಿತು ಎಂಬ ವಿಚಾರಣೆ ವೇಳೆ ಆತ ಬಾಯ್ಬಿಟ್ಟಿದ್ದಾನೆ.ಆತನ ಹೆಂಡತಿ ಈಗಾಗಲೇ ಎರಡು ಮದುವೆ ಆಗಿದ್ದಳು. ಎರಡನೇ ಗಂಡ ಬೇರೆ ಧರ್ಮಕ್ಕೆ ಸೇರಿದವ. ಮೊದಲ ಗಂಡ ಹಿಂದೂವಾಗಿದ್ದ. 16 ವರ್ಷದ ಮಗನ ಜೊತೆಗೆ ಮೂರನೇ ಮದುವೆಯನ್ನು ನನ್ನ (ವಿನೋದ್‌ ಶರ್ಮಾ) ಜೊತೆ ಆಗಿದ್ದಳು ಎಂದು ತಿಳಿಸಿದ್ದಾನೆ.ಭವ್ಯ ಈಗಾಗಲೇ ಮೂರು ಮದುವೆ ಅಗಿದ್ದಳು. ಯೋಗೇಂದ್ರ ಯಾದವ್​​ ಜೊತೆ ಬೇಬಿ ಎಂಬ ಹೆಸರಿನಲ್ಲಿ ಮೊದಲ ಮದುವೆಯಾ ಸಂಬಂಧ ಮುರಿದುಕೊಂಡು ಅನೀಸ್​ ಅನ್ಸಾರಿ ಜೊತೆ ಆಸಿಫಾ ಹೆಸರಿನಲ್ಲಿ ಎರಡನೇ ಮದುವೆಯಾಗಿದ್ದಳು. ಐದು ತಿಂಗಳ ಹಿಂದೆ ಸಂಬಂಧ ಕಡಿದುಕೊಂಡ ಆಕೆ ವಿನೋದ್​ ಶರ್ಮಾನನ್ನು ಭವ್ಯ ಎಂಬ ಹೆಸರಿನಲ್ಲಿ ಮದುವೆಯಾಗಿದ್ದಳು.ಮಗ ಇದ್ದರೂ ಹಳೆ ಗಂಡನ ಜೊತೆ ಸಂಬಂಧ ಮುರಿದುಕೊಂಡ ಹಿನ್ನಲೆ ಆಕೆ ಜೊತೆ ಚೆನ್ನಾಗಿ ಸಂಸಾರ ನಡೆಸುತ್ತಿದ್ದೆ. ನಮಗೆ ಮಕ್ಕಳಿಲ್ಲದ ಕಾರಣ ಆಕೆಯ ಮಗನನ್ನೇ ತನ್ನ ಮಗುವಿನಂತೆ ಪ್ರೀತಿಸುತ್ತಿದ್ದೆ. ಡಿ. 24ರಂದು ಇಂದೋರ್‌ಗೆ ಹೋದ ಭವ್ಯ ಅಲ್ಲಿಂದ ವೀಡಿಯೊ ಕಾಲ್​ ಮಾಡಿದ್ದಳು. ಆಕೆಯ ಎರಡನೇ ಗಂಡ ಅನೀಸ್​ ಜೊತೆಯಲ್ಲಿದ್ದಳು. ಆತನ ಜೊತೆ ಸಂಬಂಧ ಮುಂದುವರಿಸಿದ್ದಕ್ಕೆ ಹತ್ಯೆ ಮಾಡುವ ಯೋಜನೆ ರೂಪಿಸಿದ್ದಾಗಿ ಆರೋಪಿ ತಿಳಿಸಿದ್ದಾನೆ.ಮಗನಿಗೆ ದುಡ್ಡು ಕೊಟ್ಟು ಹೊರಗೆ ಹೋಗಲು ಕಳುಹಿಸಿ ಆಕೆಯನ್ನು ಕೊಲೆ ಮಾಡಿ ರಕ್ತದ ಕಲೆಗಳನ್ನು ಶುಚಿಗೊಳಿಸಿದ್ದ. ಆಕೆಯ ದೇಹವನ್ನು ರವಾನೆ ಮಾಡುವ ಹೊತ್ತಿಗೆ ಮಗ ಬಂದಿದ್ದಾನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

Please follow and like us:

Leave a Reply

Your email address will not be published. Required fields are marked *

Next Post

ಮಗು ಹೆತ್ತುಕೊಡಲಿಲ್ಲ ಎಂದು ಪತ್ನಿಯ ಗುಪ್ತಾಂಗವನ್ನು ಬ್ಲೇಡ್​​ನಿಂದ ಕೊಯ್ದ ದುಷ್ಟ ಪತಿ

Thu Dec 29 , 2022
  ಮದುವೆಯಾಗಿ 6 ವರ್ಷಗಳೇ ಕಳೆದರೂ ಒಂದು ಮಗುವನ್ನು ಹೆತ್ತುಕೊಡಲಿಲ್ಲ ಎಂದು ಹೆಂಡತಿಯನ್ನು ಸದಾ ಮೂದಲಿಸುತ್ತ, ಜಗಳವಾಡುತ್ತಿದ್ದ ಪತಿಯೀಗ ಮತ್ತೊಂದು ಹಂತದ ಕ್ರೌರ್ಯ ತೋರಿಸಿದ್ದಾನೆ. ತನ್ನ ಹೆಂಡತಿಯ ಗುಪ್ತಾಂಗವನ್ನು ಬ್ಲೇಡ್ ನಿಂದ ಕೊಯ್ದು ಗಾಯಗೊಳಿಸಿದ್ದಾನೆ.ಆಕೆ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.ಉತ್ತರ ಪ್ರದೇಶದ ಲಖನೌದ ರವೀಂದ್ರ ಎಂಬಾತ ತನ್ನ ಪತ್ನಿ ಬಸುರಾಗಲಿಲ್ಲ ಎಂಬ ಕಾರಣಕ್ಕೆ ಕ್ರೋಧಗೊಂಡು ಈ ಕೃತ್ಯ ಎಸಗಿದ್ದಾನೆ. ಮದುವೆಯಾಗಿ ಆರುವರ್ಷಗಳಾದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಇದೇ ವಿಚಾರಕ್ಕೆ ಇತ್ತೀಚೆಗೆ […]

Advertisement

Wordpress Social Share Plugin powered by Ultimatelysocial