ಹಾಸನಾಂಬೆ ದೇಗುಲಕ್ಕೆ ಇಂದು ಭೇಟಿ ಕೊಟ್ಟು ದರ್ಶನ ಪಡೆದ ಮೈಸೂರು ರಾಜ ವಂಶಸ್ಥ ಯದುವೀರ ಚಾಮರಾಜ ಒಡೆಯರ್ ದೇವಿಗೆ ವಿಶೇಷ ಪೂಜೆ ಸಲ್ಲಿಸಿದದರು. ಇದೇ ಮೊದಲ ಬಾರಿಗೆ ಯದುವೀರ ಒಡೆಯರ್ ಹಾಸನಾಂಬೆ ದರ್ಶನ ಪಡೆದರು.ತಲಕಾಡು ಪಂಚಲಿಂಗ ಮಹೋತ್ಸವ; ಯದುವೀರ್ ದಂಪತಿಯಿಂದ ವಿಶೇಷ ಪೂಜೆವರ್ಷಕ್ಕೆ ಒಮ್ಮೆ ದರ್ಶನ ನೀಡೊ ಹಾಸನಾಂಬೆ ತಾಯಿ ದರ್ಶನಕ್ಕಿಂದು ಭಕ್ತರ ದಂಡು ಆಗಮಿಸಿದೆ. ಭಾನುವಾರವಾಗಿರೋ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಆಗಮಿಸುತ್ತಿರುವ ಅಪಾರ ಭಕ್ತರು ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆಯುತ್ತಿದ್ದಾರೆ. ನಾಲ್ಕನೇ ದಿನವಾದ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು ಇನ್ನು ಕೇವಲ ಆರು ದಿನ ಮಾತ್ರ ಹಾಸನಾಂಬೆ ದೇಗುಲ ತೆರೆದಿರಲಿದೆ.
ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :
https://play.google.com/store/apps/details?id=com.speed.newskannada