ತೆಲಂಗಾಣ: ಆಸ್ತಿಗಾಗಿ ತಂಗಿಗೆ ಬೆಂಕಿ ಹಚ್ಚಿ ಕೊಂದು ಆಸ್ಪತ್ರೆ ಸೇರಿದ ಅಕ್ಕ

ತೆಲಂಗಾಣ: ತವರಿನ ಆಸ್ತಿಗಾಗಿ ಮಹಿಳೆಯೊಬ್ಬಳು ತನ್ನ ತಂಗಿಗೆ ಬೆಂಕಿ ಹಚ್ಚಿ ಕೊಂದಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ವಾಡಿಯಾರಾಮ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.36 ವರ್ಷದ ವರಲಕ್ಷ್ಮಿ ಮೃತ ಮಹಿಳೆ. ವಾಡಿಯಾರಾಮ್ ಗ್ರಾಮದಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ವರಲಕ್ಷ್ಮಿ ಪತಿಯಿಂದ ದೂರವಾಗಿದ್ದಳು.ವರಲಕ್ಷ್ಮಿಗೆ ರಾಜೇಶ್ವರಿ ಎಂಬ ಸಹೋದರಿಯಿದ್ದು, ಆಕೆ ಕೂಡ ವಿಚ್ಛೇದಿತಳು.ಕಾಮರೆಡ್ಡಿ ಜಿಲ್ಲೆಯಲ್ಲಿ ತವರು ಮನೆಯಿದ್ದು, ಪಾಲಕರ ಬಳಿ 5 ಎಕರೆ ಜಮೀನಿತ್ತು. ಈ ಜಮೀನಿಗಾಗಿ ಅಕ್ಕ-ತಂಗಿ ನಡುವೆ ಕಲಹ ಆರಂಭವಾಗಿದೆ. ರಾಜೇಶ್ವರಿ ತನ್ನ ಸಹೋದರಿ ವರಲಕ್ಷ್ಮಿ ಮನೆಗೆ ಬಂದು ಆಸ್ತಿ ವಿಚಾರವಾಗಿ ಮಾತನಾಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿದೆ.ಜಗಳ ವಿಕೋಪಕ್ಕೆ ತಿರುಗಿದ್ದು, ವರಲಕ್ಷ್ಮಿಗೆ ಪೆಟ್ರೋಲ್ ಸುರಿದು ರಾಜೇಶ್ವರಿ ಬೆಂಕಿ ಹಚ್ಚಿದ್ದಾಳೆ. ಈ ವೇಳೆ ರಾಜೇಶ್ವರಿಗೂ ಬೆಂಕಿ ತಗುಲಿದೆ. ತೀವ್ರವಾದ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿ ತಲುಪಿದ್ದ ವರಲಕ್ಷ್ಮಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಇತ್ತ ರಾಜೇಶ್ವರಿ ಕೂಡ ಶೇ.80ರಷ್ಟು ಸುಟ್ಟಗಾಯಗಳಿಂದ ನರಳುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

71,000 ರೂ. ಬಹುಮಾನ 10 ಅಡಿಯ ದೋಸೆ ತಿಂದರೆ!

Thu Feb 3 , 2022
ನವದೆಹಲಿ, ಫೆಬ್ರವರಿ 03; ಗರಿ ಗರಿ ದೋಸೆ ಮುರಿಯುವ ದೋಸೆ ವಸ್ವಾಮಿ ಶಕ್ತಿ ಸಾಗರ್ ಹೋಟೆಲ್‌ನಲ್ಲಿ ಸಿಗುವ ಈ ದೋಸೆಯ ಬೆಲೆ 1,500 ರೂ.ಗಳು ಇದುವರೆಗೂ 26 ಜನರು ಸವಾಲು ಸ್ವೀಕರಿಸಿ ದೋಸೆಗೆ ಕೈ ಹಾಕಿ ಸೋತು ಸುಣ್ಣವಾಗಿದ್ದಾರೆ. 40 ನಿಮಿಷಲ್ಲಿ ದೋಸೆ ತಿನ್ನಲಾಗದೇ ಬಿಲ್ ಕೊಟ್ಟು ಮನೆ ದಾರಿ ಹಿಡಿದಿದ್ದಾರೆ.ಹೋಟೆಲ್ ಮಾಲೀಕ ಶೇಖರ್ ಕುಮಾರ್ ಈ ಕುರಿತು ಮಾತನಾಡಿದ್ದಾರೆ, “10 ಅಡಿ ದೋಸೆ ತಿನ್ನುವ ಸ್ಪರ್ಧೆಯನ್ನು ನಮ್ಮ ಹೋಟೆಲ್‌ನಲ್ಲಿ […]

Advertisement

Wordpress Social Share Plugin powered by Ultimatelysocial