ನಿಖಿಲ್ ಕುಮಾರ್ ‘ಯುದುವೀರ’ ಸಿನಿಮಾ ಸ್ಥಗಿತ:

 

ಇದೇ ವರ್ಷದ ಆರಂಭದಲ್ಲಿ ನಿಖಿಲ್ ಕುಮಾರಸ್ವಾಮಿ ಸಿನಿಮಾ ಸೆಟ್ಟೇರಿತ್ತು. ‘ರೈಡರ್’ ಸಿನಿಮಾ ಬಳಿಕ ನಿಖಿಲ್ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಬಹುದು ಎನ್ನುವ ನಿರೀಕ್ಷೆಗೆ ಹುಟ್ಟುಹಬ್ಬದಂದೇ ತೆರೆ ಎಳೆದಿದ್ದರು. ಯುವರಾಜನ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಂತೂ ನಿಜ.

ಸಿನಿಮಾ ಯಾವಾಗ ರಿಲೀಸ್ ಆಗುತ್ತೋ? ಯಾವಾಗ ನೋಡುತ್ತೇವೊ ಅಂತ ಕಾದುಕೂತಿದ್ದವರಿಗೆ ದೊಡ್ಡ ಶಾಕಿಂಗ್ ಸುದ್ದಿಯೊಂದಿದೆ.

ನಿಖಿಲ್ ಕುಮಾರಸ್ವಾಮಿ ಹಾಗೂ ಕೆವಿಎನ್ ಪ್ರೊಡಕ್ಷನ್ ಕಾಂಬಿನೇಷನ್‌ನಲ್ಲಿ ಸಿನಿಮಾ ಸೆಟ್ಟೇರಿ ಸುಮಾರು 5 ತಿಂಗಳುಗಳೇ ಆಗಿವೆ. ನಿಖಿಲ್ ಬರ್ತ್‌ಡೇಯಂದೇ ಈ ಸಿನಿಮಾಗೆ ‘ಯದುವೀರ’ ಅಂತ ಟೈಟಲ್ ಕೂಡ ಫಿಕ್ಸ್ ಆಗಿತ್ತು. ಸ್ಯಾಂಡಲ್‌ವುಡ್‌ ಯು

‘ಯದುವೀರ’ ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಇದೂವರೆಗೂ ಒಂದೇ ಒಂದು ಅಪ್‌ಡೇಟ್ ಸಿಕ್ಕಿರಲಿಲ್ಲ. ಬರೋಬ್ಬರಿ 5 ತಿಂಗಳ ಬಳಿಕ ‘ಯದುವೀರ’ನ ಅಡ್ಡದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಇದು ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳಿಗೆ ಖಂಡಿತಾ ಬೇಸರ ಆಗಬಹುದೇನೋ. ಅಸಲಿಗೆ ‘ಯದುವೀರ’ ಅಡ್ಡಾದಲ್ಲಿ ಹರಿದಾಡುತ್ತಿರುವ ಸುದ್ದಿಯೇನು? ತಿಳಿಯಲು ಮುಂದೆ ಓದಿ.

‘ಯದುವೀರ’ ಸಿನಿಮಾ ಸ್ಥಗಿತಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ 5ನೇ ಸಿನಿಮಾ ‘ಯದುವೀರ’. ಈ ಸಿನಿಮಾಗಾಗಿ ಅಭಿಮಾನಿಗಳು ಕಾದಿದ್ದಷ್ಟೇ ಬಂತು. ಆದರೆ, ಅದ್ಯಾಕೋ ಮುಂದಕ್ಕೇ ಹೋಗುತ್ತಿಲ್ಲ ಅನ್ನೋ ಮಾತು ಹರಿದಾಡುತ್ತಿದೆ. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ ಏನಪ್ಪಾ ಅಂದ್ರೆ, ನಿಖಿಲ್ ಸಿನಿಮಾ ‘ಯದುವೀರ’ ತಾತ್ಕಾಲಿಕವಾಗಿ ನಿಂತಿದೆ ಎನ್ನಲಾಗುತ್ತಿದೆ. ನಿರ್ಮಾಣ ಸಂಸ್ಥೆಯಾಗಲಿ ಅಥವಾ ನಿಖಿಲ್ ಕುಮಾಸ್ವಾಮಿಯಾಗಲಿ ಈ ಸಿನಿಮಾ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಅನ್ನೋ ಮಾತು ಕೇಳಿ ಬರುತ್ತಿವೆ.

‘ಯದುವೀರ’ ಸಿನಿಮಾ ನಿಂತಿದ್ಯಾಕೆ?

ನಿಖಿಲ್ ಕುಮಾರಸ್ವಾಮಿ ಸಿನಿಮಾವನ್ನು ಮಂಜು ಅಥರ್ವ ನಿರ್ದೇಶನ ಮಾಡುತ್ತಿದ್ದರು. ಇದು ಮಂಜು ಅಥರ್ವ ಅವರ ಚೊಚ್ಚಲ ಸಿನಿಮಾ ಆಗಿತ್ತು. ಆದರೆ, ದುರಾದೃಷ್ಟವಶಾತ್ ಇವರ ಮೊದಲ ಸಿನಿಮಾವೇ ತಾತ್ಕಾಲಿಕವಾಗಿ ನಿಂತಿದೆ ಎಂದು ಸ್ಯಾಂಡಲ್‌ವುಡ್‌ ಮಾತಾಡಿಕೊಳ್ಳುತ್ತಿದೆ. ಮತ್ತೆ ‘ಯದುವೀರ’ ಸಿನಿಮಾ ಯಾವಾಗ ಶುರುವಾಗುತ್ತೆ ಎನ್ನುವ ಬಗ್ಗೆ ಮಾಹಿತಿ ಇಲ್ಲ ಎನ್ನಲಾಗಿದೆ. ಇತ್ತ ಕೆವಿಎನ್ ಪ್ರೊಡಕ್ಷನ್ ಕೂಡ ಹೊಸ ಸಿನಿಮಾದ ಕಡೆ ಮುಖ ಮಾಡಿದೆ. ಹಾಗಾಗಿ ‘ಯದುವೀರ’ ಮತ್ತೆ ಶುರುವಾಗುತ್ತಾ? ಯಾವಾಗ ಆರಂಭ ಆಗುತ್ತೆ? ಎನ್ನುವ ಪ್ರಶ್ನೆಯಂತೂ ಕಾಡುತ್ತಿದೆ.

‘ಯದುವೀರ’ ಬಗ್ಗೆ ನಿರ್ಮಾಣ ಸಂಸ್ಥೆ ಏನು ಹೇಳುತ್ತೆ?

‘ಯದುವೀರ’ ಸಿನಿಮಾ ಬಗ್ಗೆ ಇಂತಹ ಸುದ್ದಿ ಹರಿದಾಡುತ್ತಿದ್ದಂತೆ ಕೆವಿಎನ್ ಸಂಸ್ಥೆ ಫಿಲ್ಮಿಬೀಟ್‌ಗೆ ಪ್ರತಿಕ್ರಿಯೆ ನೀಡಿದೆ. ” ಯದುವೀರ ಸಿನಿಮಾ ಶೂಟಿಂಗ್ ನಡೆಯುತ್ತಿಲ್ಲ. ನಿಖಿಲ್ ಕುಮಾರಸ್ವಾಮಿಯವರು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಯದುವೀರ ಶೂಟಿಂಗ್ ನಡೆಯುತ್ತಿಲ್ಲ. ಸದ್ಯಕ್ಕೆ ನಾವು ಧ್ರುವ ಸರ್ಜಾ ಹಾಗೂ ಪ್ರೇಮ್ ಅವರ ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇವೆ.” ಎಂದು ಕೆವಿಎನ್ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಸುಪ್ರಿತ್ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

ರಾಜಕೀಯದಲ್ಲಿ ನಿಖಿಲ್ ಬ್ಯುಸಿ

ನಿಖಿಲ್ ಕುಮಾರಸ್ವಾಮಿ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಪಕ್ಷವನ್ನು ಮತ್ತಷ್ಟು ಬಲಪಡಿಸಲು ರಾಜಕೀಯದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಹಾಗೆ ನೋಡಿದರೆ, ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಷ್ಟರೊಳಗೆ ನಿಖಿಲ್ ಸಿನಿಮಾ ಮುಗಿಸಬೇಕಿತ್ತು. ಆದರೆ, ಇನ್ನೂ ಶೂಟಿಂಗ್ ಮುಗಿಯದೆ ಇರುವುದು ನೋಡಿದರೆ, ‘ಯುದುವೀರ’ ಚುನಾವಣೆಗೂ ಮುನ್ನ ಮುಗಿಯುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಇತ್ತ ಕೆವಿಎನ್ ಸಂಸ್ಥೆ ಪ್ರತಿಕ್ರಿಯೆ ನೀಡಿದ್ರೂ, ಸಂಪೂರ್ಣ ಮಾಹಿತಿಯನ್ನು ಬಿಟ್ಟುಕೊಡದೆ ಇರುವುದು ಹಲವು ಗೊಂದಲಗಳನ್ನು ಸೃಷ್ಟಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಮೂಲ ಇಟಲಿ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಟಾಂಗ್ ನೀಡಿದರು.

Sat May 28 , 2022
ಕೊಪ್ಪಳ: ಸಂಘಪರಿವಾರದ ಮೂಲ ಎಲ್ಲರಿಗೂ ಗೊತ್ತಿದೆ. ಆದರೆ, ಕಾಂಗ್ರೆಸ್ ಮೂಲ ಇಟಲಿ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಟಾಂಗ್ ನೀಡಿದರು. ನಗರದಲ್ಲಿ ಶನಿವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು. ಸಿದ್ದರಾಮಯ್ಯ ಐದು ವರ್ಷದ ತಮ್ಮ ಅಧಿಕಾರದಲ್ಲಿ ಏನು ಮಾಡಿದ್ದಾರೆಂದು ಕಿಡಿಕಾರಿದರು. ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ಪಿತೂರಿ ಇದೆ. ನಾವು ಹಿಜಾಬ್ ನೋಡುತ್ತಿಲ್ಲ. ಅದರ ಹಿಂದಿರುವ ಪಿತೂರಿ ಬಗ್ಗೆ ಮಾತನಾಡುತ್ತಿದ್ದೇವೆ. ಈ ದೇಶದ ಕಾನೂನು ಉಲ್ಲಂಘನೆ ಮಾಡುವವರನ್ನು ಗಮನಿಸುತ್ತಿದ್ದೇವೆ. ಇವತ್ತಲ್ಲ ನಾಳೆ ಅವರು ಇಡೀ […]

Advertisement

Wordpress Social Share Plugin powered by Ultimatelysocial