ಯೂಟ್ಯೂಬ್ ನಲ್ಲಿ ಬಂಟ್ವಾಳದ ಯುವತಿಯ ಫೋಟೋ ದುರ್ಬಳಕೆ.!

ಬಂಟ್ವಾಳದ ಯುವತಿಯೋರ್ವಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ದುರ್ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿ ದಂಪತಿಗಳಿಬ್ಬರನ್ನು ಬಂಧಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.ಬಂಧಿತರನ್ನು ಶಿವಮೊಗ್ಗ ಮೂಲದ ಹರೀಶ್ ಮತ್ತು ಅನುಷಾ ಎಂದು ಗುರುತಿಸಲಾಗಿದೆ. ಆರೋಪಿಗಳಿಬ್ಬರು ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿದ್ದು, ಕನ್ನಡ ಲೈಟ್ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ವೀಕ್ಷಕರ ಗಮನಸೆಳೆಯುವ ವಿಡಿಯೋವನ್ನು ಅಪ್ಲೋಡ್ ಮಾಡುತ್ತಿದ್ದರು. ಅಲ್ಲದೇ ವಿಡಿಯೋಗಳಿಗಾಗಿ ಹಲವು ಫೋಟೋಗಳನ್ನು ಬಳಸುತ್ತಿದ್ದ ಇವರು ಬಂಟ್ವಾಳದ ಯುವತಿಯೋರ್ವಳ ಫೋಟೋವನ್ನು ಜ್ಯೋತಿಷ್ಯದ ವಿಚಾರಕ್ಕೆ ಸಂಬಂಧಿಸಿ ದುರ್ಬಳಕೆ ಮಾಡಿರುವುದಾಗಿ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಬಂಟ್ವಾಳ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಎಂ ಇಬ್ರಾಹಿಂ ಕುರಿತಂತೆ ಮೊದಲಿಗೆ ಸಹಾನುಭೂತಿ ತೋರುತ್ತಿದ್ದವರಿಂದಲೇ ಈಗ ಚಾಟಿ

Wed Feb 2 , 2022
ವಿಧಾನ ಪರಿಷತ್ತಿನ ವಿಪಕ್ಷ ನಾಯಕನ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಪ್ರತಿದಿನವೂ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತಿರುವ, ಕಾಂಗ್ರೆಸ್ ಬಗ್ಗೆ ಅಸಮಾಧಾನಗೊಂಡಿರುವ ಎಸ್.ಆರ್. ಪಾಟೀಲ್ ಮತ್ತು ಕಾಂಗ್ರೆಸಿನಿಂದ ಉಚ್ಛಾಟಿತಗೊಂಡಿರುವ ರೋಷನ್ ಬೇಗ್ ಭೇಟಿ ಮಾಡಿ ‘ಮಹತ್ವದ ಚರ್ಚೆ’ ನಡೆಸಿರುವ, ಜೆಡಿಎಸ್ ನಾಯಕರ ಮನೆ ಬಾಗಿಲಲ್ಲೇ ಬಿಡಾರ ಹೂಡಿರುವ ಸಿ.ಎಂ. ಇಬ್ರಾಹಿಂ ನಡೆ ಬಗ್ಗೆ ಈಗ ಕಾಂಗ್ರೆಸ್ ಪಕ್ಷದಲ್ಲಿ ವ್ಯಾಪಕ ವಿರೋಧ ಆಗುತ್ತಿದೆ.‘ಇಬ್ರಾಹಿಂ ಅವರದು ಅತಿಯಾಯಿತು’ ಎಂಬ ಭಾವನೆ ಬೆಳೆಯುತ್ತಿದೆ. ಮೊದಲಿಗೆ ಸಹಾನುಭೂತಿ […]

Advertisement

Wordpress Social Share Plugin powered by Ultimatelysocial