ಎಐಸಿಸಿಯಿಂದಲೇ ಜಮೀರ್ ಗೆ ನೋಟಿಸ್
ಪಕ್ಷದ ಶಿಸ್ತು ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ನೋಟಿಸ್
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ರಿಂದ ನೋಟಿಸ್
ಇಂದು ವಿಚಾರಣೆಗೆ ಹಾಜರಾಗ್ತಾರಾ ಶಾಸಕ ಜಮೀರ್ ಅಹ್ಮದ್..?
ಇಂದು ವಿಚಾರಣೆಗೆ ಎಸಿಬಿ ಮುಂದೆ ಹಾಜರಾಗಬೇಕಿರೋ ಜಮೀರ್ ಅಹ್ಮದ್
ದಾಖಲೆಗಳ ಸಹಿತ 26 ನೇ ತಾರೀಖಿನ ಒಳಗೆ ವಿಚಾರಣೆಗೆ ಬರುವಂತೆ ನೋಟೀಸ್ ನೀಡಿದ್ದ ಎಸಿಬಿ
ಆದಾಯಕ್ಕಿಂತ ಆಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನಲೆ ದಾಖಲೆಗಳನ್ನ ಕೇಳಿರೋ ಎಸಿಬಿ
ಭವ್ಯ ಬಂಗಲೆಯ ಬೆಲೆಬಾಳುವ ವಸ್ತುಗಳ ದಾಖಲೆಗಳನ್ನ ತರಲು ಸೂಚಿಸಿರೋ ಅಧಿಕಾರಿಗಳು
ಹತ್ತು ದಿನದ ಒಳಗಾಗಿ ವಿಚಾರಣೆಗೆ ಹಾಜರಾಗಿ ದಾಖಲೆ ಸಲ್ಲಿಕೆಗೆ ಸೂಚಿಸಲಾಗಿತ್ತು
ಇಂದು ಎಸಿಬಿ ಕೊಟ್ಟಿದ್ದ ನೋಟೀಸ್ ಕೊನೆ ದಿನಾಂಕವಾಗಿದ್ದು, ವಿಚಾರಣೆಗೆ ಹಾಜರಾಗಬೇಕಿದೆ
ಜುಲೈ 16 ನೇ ತಾರೀಖು ಜಮೀರ್ ಗೆ ನೋಟೀಸ್ ಕೊಟ್ಟಿದ್ದ ಎಸಿಬಿ ಅಧಿಕಾರಿಗಳು
ಇದೇ ತಿಂಗಳ ಐದನೇ ತಾರೀಖು ಭವ್ಯ ಬಂಗಲೆ ಸೇರಿ ಐದು ಕಡೆ ರೇಡ್ ಮಾಡಿದ್ದ ಅಧಿಕಾರಿಗಳು
ಸದ್ಯ ಇಂದು ದಾವಣಗೆರೆ ಚಿತ್ರದುರ್ಗ ಪ್ರವಾಸದಲ್ಲಿರುವ ಜಮೀರ್
ಒಂದ್ವೇಳೆ ಇಂದು ವಿಚಾರಣೆಗೆ ಬರದಿದ್ದರೆ ಮತ್ತೆ ನೋಟೀಸ್ ನೀಡಲಿರೋ ಎಸಿಬಿ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: