ಬೆಂಗಳೂರು: ಪಾದರಾಯನಪುರದಲ್ಲಿ ಗಲಭೆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಕೊರೊನಾ ತಪಾಸಣೆಯ ಫಲಿತಾಂಶ ಇಂದು ಕೈ ಸೇರುವ ಸಾಧ್ಯತೆ ಇದೆ. ಪೊಲೀಸ್ ಸಿಬ್ಬಂದಿ, ಗಲಾಟೆ ಪ್ರಕರಣ ಆರೋಪಿಗಳ ಪತ್ತೆ ಕರ್ತವ್ಯದಲ್ಲಿ ತೊಡಗಿದ್ದರು. ಬಂಧನದ ಬಳಿಕ ರಾಮನಗರ ಜೈಲಿನಲ್ಲಿ ಇರಿಸಿದ್ದ ವೇಳೆ ಐವರು ಆರೋಪಿಗಳಲ್ಲಿ ಸೋಂಕು ಇರೋದು ದೃಢಪಟ್ಟಿತ್ತು. ಹೀಗಾಗಿ ಕಿಡಿಗೇಡಿಗಳ ಪತ್ತೆಗೆ ಶ್ರಮಿಸಿದ್ದ ಪಶ್ಚಿಮ, ಕೇಂದ್ರ, ಉತ್ತರ ವಿಭಾಗ ಹಾಗೂ ಸಿಸಿಬಿ ಪೊಲೀಸರನ್ನ ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಮೈಸೂರು ರಸ್ತೆಯ ಸಿಎಆರ್ ಮೈದಾನದಲ್ಲಿ ೧೮೬ ಪೊಲೀಸರಿಗೆ ತಪಾಸಣೆ ಮಾಡಲಾಗಿತ್ತು. ೧೫೦ಕ್ಕು ಹೆಚ್ಚು ಸಿಬ್ಬಂದಿಯ ಮಾದರಿ ಸಂಗ್ರಹ ಮಾಡಲಾಗಿತ್ತು. ಅದರ ರಿರ್ಪೋಟ್ ಇಂದು ಕೈ ಸೇರುವ ನಿರೀಕ್ಷೆ ಇದೆ. ಸದ್ಯ ಪೊಲೀಸರಲ್ಲಿ ಆತಂಕ ಶುರುವಾಗಿದೆ.
ಕೊರೊನಾ ಟೆಸ್ಟ್ ರಿಸಲ್ಟ್ ಬರುವ ಸಾಧ್ಯತೆ- ಪೊಲೀಸರಲ್ಲಿ ಆತಂಕ
Please follow and like us: