ಕರ್ನಾಟಕ ಸರ್ಕಾರ ಬಾರ್ ಓಪನ್ ಮಾಡಿ ಮದ್ಯಪ್ರಿಯರಿಗೆ ಕೊರೋನಾ ಗಿಫ್ಟ್ ನೀಡಿದ್ದಾರೆ. ಜನ ಜೀವಭಯದ ಜೊತೆಯೇ ಭರ್ಜರಿಯಾಗಿ ಎಣ್ಣೆ ಹೊಡಿತ್ತಿದ್ದಾರೆ. ಕರ್ನಾಟಕದ ನಿರ್ಧಾರ ನೋಡಿ ಈಗ ತಮಿಳುನಾಡು ಸರ್ಕಾರ ಕೂಡಾ ಬಾರ್ ಓಪನ್ ಮಾಡೋದಕ್ಕೆ ತಯಾರಿ ನಡೆಸಿದೆ. ಈಗಾಗ್ಲೇ ಆರ್ಥಿಕ ಸ್ಥಿತಿ ನೆಲಕಚ್ಚಿರೋದ್ರಿಂದ ಸರ್ಕಾರಗಳು ಅಬಕಾರಿ ಇಲಾಖೆ ಮೇಲೆ ಕಣ್ಣು ಹಾಯಿಸಿವೆ. ಮೇ ಏಳರ ನಂತ್ರ ತಮಿಳುನಾಡಿನಲ್ಲಿ ಬಾರ್ ಓಪನ್ ಮಾಡೋದಕ್ಕೆ ಸರ್ಕಾರ ಯೋಚಿಸಿದೆ. ಇದರ ವಿರುದ್ಧ ನಟ ಕಮಲ್ ಹಾಸನ್ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರಗಳು ಬಡವರ ಪರವಾಗಿ ಯೋಚನೆ ಮಾಡಬೇಕು. ಕೊಯಂಬೆದು ಮಾರುಕಟ್ಟೆಯನ್ನ ಕಾಪಾಡಲು ಸೋತ ಸರ್ಕಾರ ಈಗ ಲಿಕ್ಕರ್ ಅಂಗಡಿ ತೆರೆಯಲು ಮುಂದಾಗಿದೆ. ಸರ್ಕಾರದ ತಪ್ಪು ಹೆಜ್ಜೆಯಿಂದ ಜೀವಹಾನಿಯಾಗುತ್ತೆ. ಇದರ ಅರಿವು ಸರ್ಕಾರಕ್ಕೆ ಇದೆಯಾ ಅಂತ ಪ್ರಶ್ನಿಸಿದೆ.
ಸರ್ಕಾರದ ವಿರುದ್ಧ ಕಮಲ್ ಹಾಸನ್ ಗರಂ
Please follow and like us: