ಚಲಸ್ಸೇರಿ ನಿವಾಸಿ ಸಾದಿಕ್ ಅವರ ಆಪ್ತ ಸಂಬಂಧಿಕರಿಗೆ ಕರೊನಾ ವೈರಸ್ ಪಾಸಿಟಿವ್ ಇದ್ದ ಕಾರಣ, ಸಾದಿಕ್ ಮತ್ತು ಆತನ ಪತ್ನಿಗೆ ಕ್ವಾರಂಟೈನ್ ನಲ್ಲಿರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದರು. ಇದರ ಹಿನ್ನೆಲೆಯಲ್ಲಿ ತಮ್ಮ 11 ತಿಂಗಳ ಮಗು ಮೊಹಮ್ಮದ್ ಇಸ್ಖಾನ್ ನನ್ನು ಸಮೀಪದ ಸಂಬಂಧಿಕರ ಬಳಿ ಬಿಟ್ಟಿದ್ದರು. ತಡರಾತ್ರಿ ಶನಿವಾರ ಬಾತ್ರೂಮ್ನಲ್ಲಿ ತುಂಬಿಟ್ಟಿದ್ದ ನೀರಿನ ಬಕೆಟ್ ಒಳಗೆ ಮಗು ಬಿದ್ದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸಮೀಪದ ಆಸ್ಪತ್ರೆಗೆ ಮಗುವನ್ನು ಕರೆದೊಯ್ದರೂ ಪ್ರಯೋಜನವಾಗಿಲ್ಲ. ಮಗುವಿನ ಪ್ರಾಣ ಉಳಿಸಲು ಆಗಲಿಲ್ಲ. ನಂತರ ಮಗುವಿನ ಮೃತದೇಹವನ್ನು ಖಾಸಗಿ ಆಸ್ಪತ್ರೆಯಿಂದ ತ್ರಿಶ್ಶೂರ್ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಿದ್ದು ಕೋವಿಡ್ 19 ರ ಟೆಸ್ಟ್ಗೆ ಒಳಪಡಿಸಲಾಗಿದೆ. ಸದ್ಯಕ್ಕೆ ಇದರ ಫಲಿತಾಂಶ ಇನ್ನೂ ಬಂದಿಲ್ಲ, ಮತ್ತು ಈ ಪ್ರಕರಣವು ಚಲಸ್ಸೇರಿ ಪೊಲೀಸ್ ಠಾಣೆಯ ದಾಖಲಾಗಿದೆ.