ದೆಹಲಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕ್ಷಾಮಾ, ಬರಗಾಲ ಸಂಭವಿಸಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಎಲ್ಲಾ ದೇಶಗಳು ಈಗಲೇ ಎಚ್ಚೆತ್ತುಕೊಂಡರೆ ಒಳಿತು ಇಲ್ಲದಿದ್ದರೆ ಭವಿಷ್ಯದಲ್ಲಿ ಹಸಿವಿನ ಸಾಂಕ್ರಾಮಿಕ ರೋಗಗಳು ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ. ವಿಶ್ವ ಆಹಾರ ಯೋಜನೆಗಳ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಬಿಯಾಸ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರ್ಚುವಲ್ ಅಧಿವೇಶನದಲ್ಲಿ ಈ ಬಗ್ಗೆ ವಿವರ ನೀಡಿದ್ದಾರೆ. ಕ್ಷಾಮ ಎದುರಾಗದಂತೆ ಈಗಿನಿಂದಲೇ ನಾವು ಸಿದ್ಧತೆಗಳನ್ನು ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು. ಜಗತ್ತಿನಾದ್ಯಂತ ೮೨.೧ ಕೋಟಿ ಜನ ಪ್ರತಿರಾತ್ರಿ ಹಸಿವಿನಿಂದ ಮಲಗುತ್ತಿದ್ದಾರೆ. ಪ್ರಸ್ತುತ ೧೩.೫ ಕೋಟಿ ಜನರಿಗೆ ಸಮರ್ಪಕ ಆಹಾರ ದೊರೆಯಿತ್ತಿಲ್ಲ ಎಂದು ವಿವರಿಸಿದರು.
ವಿಶ್ವ ಸಂಸ್ಥೆ ಎಚ್ಚರಿಕೆ
Please follow and like us: