ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಎಲ್ಲಾ ಮೆಡಿಕಲ್ ಶಾಪ್ಗಳು ಹಾಗೂ ಆಸ್ಪತ್ರೆಯ ಮೆಡಿಕಲ್ಸ್ನಲ್ಲಿ ಜ್ವರ, ನೆಗಡಿ ಹಾಗೂ ಕೆಮ್ಮಿಗೆ ಔಷಧಿ ಪಡೆಯುವವರ ವಿವರ ಪಡೆಯಬೇಕು ಎಂದು ಆದೇಶಿಸಲಾಗಿದೆ. ಈ ಸಂಬಂಧ ಇಂದು ಹೊಸ ಅಧಿಸೂಚನೆ ಜಾರಿ ಮಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಪ್ಯಾರಾಸಿಟಮಲ್, ಸಿರಪ್ ಹಾಗೂ ನೆಗಡಿ ಮಾತ್ರೆಗಳನ್ನು ಪಡೆದವರ ವಿವರ ಪಡೆಯಬೇಕು. ಎಲ್ಲರನ್ನ ಪತ್ತೆ ಮಾಡಲು ಅಡ್ರೆಸ್, ಫೋನ್ ನಂಬರ್ ಮತ್ತು ಲ್ಯಾಂಡ್ ಮಾರ್ಕ್ ಸಂಗ್ರಹಿಸಬೇಕು. ಅದನ್ನ ಜಿಲ್ಲಾ ಆರೋಗ್ಯಾಧಿಕಾರಿಗೆ ನೀಡಬೇಕು ಎಂದು ರಾಜ್ಯ ಸರ್ಕಾರ ಇಂದು ಆದೇಶಿಸಿದೆ.
ಔಷಧಿ ಪಡೆಯುವವರ ವಿವರ ಸಂಗ್ರಹಿಸಲು ಸರ್ಕಾರದ ಆದೇಶ
Please follow and like us: