ಸೋರೆಕಾಯಿಯಲ್ಲಿದೆ ಆರೋಗ್ಯದ ಸೂತ್ರ.!

ಸೋರೆಕಾಯಿ ರಸ ದೇಹಕ್ಕೆ ಮಾತ್ರವಲ್ಲ ಕೂದಲಿಗೂ ಒಳ್ಳೆಯದು. ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ದೇಹತೂಕ ಇಳಿಯುತ್ತದೆ. ಚರ್ಮದ ಮೇಲೆ ಮೂಡುವ ಸುಕ್ಕು, ನೆರಿಗೆಗಳು ದೂರವಾಗುತ್ತವೆ. ಇದರಲ್ಲಿ ಸತು ಮತ್ತು ವಿಟಮಿನ್ ಸಿ ಇದ್ದು ಇದು ಅಕಾಲಿಕ ವಯಸ್ಸಿನ ಸಮಸ್ಯೆಗಳನ್ನು ತಡೆಯುತ್ತದೆ.ಇದರ ರಸವನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಬೇಕು.ಬೆಳಿಗ್ಗೆ ಎದ್ದಾಕ್ಷಣ ಕಣ್ಣು ಉಬ್ಬಿರುವವರು ಇದರ ರಸವನ್ನು ಪ್ರಯತ್ನಿಸಿ. ಇದು ಊತವನ್ನು ನಿವಾರಿಸುತ್ತದೆ. ತಾಜಾ ಸೋರೆಕಾಯಿಯ ಎರಡು ಹೋಳುಗಳನ್ನು ಕತ್ತರಿಸಿ ಕಣ್ಣಿನ ಮೇಲೆ ಇಟ್ಟು 15 ನಿಮಿಷ ಬಳಿಕ ಕಣ್ಣು ತೊಳೆದರೆ ಈ ಬಾವು ಕಡಿಮೆಯಾಗುತ್ತದೆ.ಈ ತರಕಾರಿಯಲ್ಲಿರುವ ವಿಟಮಿನ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ಹೆಚ್ಚಿನ ಸಾಂದ್ರತೆಯಿಂದ ಮುಖದ ಮೇಲೆ ಹೊಳಪು ಮರಳುತ್ತದೆ. ನಿತ್ಯ ಈ ರಸ ಸೇವಿಸುವುದರಿಂದ ದೇಹದ ಕಾರ್ಯಗಳು ನಿಯಂತ್ರಣಗೊಳ್ಳುತ್ತದೆ ಮತ್ತು ಚರ್ಮ ಹೊಳಪು ಪಡೆಯುತ್ತದೆ

 


ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಾ. ಸಂಧ್ಯಾ ಎಸ್. ಪೈ ಅವರು ಪತ್ರಿಕೋದ್ಯಮದಲ್ಲಿ ಪ್ರಸಿದ್ಧ ಹೆಸರು.

Mon Feb 27 , 2023
  ಡಾ. ಸಂಧ್ಯಾ ಎಸ್. ಪೈ ಅವರು ಪತ್ರಿಕೋದ್ಯಮದಲ್ಲಿ ಪ್ರಸಿದ್ಧ ಹೆಸರು. ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌‌ನ ನಿರ್ದೇಶಕಿಯಾಗಿ ಮತ್ತು ಆ ಸಮೂಹದ ತರಂಗ , ರೂಪತಾರ, ತುಂತುರು , ತುಷಾರ ಪತ್ರಿಕೆಗಳಿಗೆ ಸಂಪಾದಕಿಯಾಗಿ ಅವರು ಹೆಸರಾಗಿದ್ದಾರೆ.ಸಂಧ್ಯಾ ಅವರು ಬಂಟ್ವಾಳದಲ್ಲಿ 1947ರ ಫೆಬ್ರುವರಿ 26ರಂದು ಜನಿಸಿದರು. ತಂದೆ ಬಿ. ನಾರಾಯಣ ಬಾಳಿಗಾ. ತಾಯಿ ಸುಮಿತ್ರಾದೇವಿ. ಅವರು ಬೆಳೆದದ್ದು ಚಿಕ್ಕಮಂಗಳೂರಿನಲ್ಲಿ. ಮುಂದೆ ಅವರು ಮಣಿಪಾಲದ ಪ್ರತಿಷ್ಠಿತ ಪೈ ಕುಟುಂಬದ ಸೊಸೆಯಾಗಿ ಸಂಧ್ಯಾ ಎಸ್‌.ಪೈ […]

Advertisement

Wordpress Social Share Plugin powered by Ultimatelysocial