ಇಂದು ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್​ ಆಗುವುದು ಡೌಟ್​!

ಚೈತ್ರ ಮಾಸದ ಮೊದಲ ದಿನ ಯುಗಾದಿ ಹಿಂದೂಗಳ ಪಾಲಿಗೆ ಹೊಸ ವರ್ಷದ ಮೊದಲ ದಿನ. ಆದ್ರೆ, ಈ ಬಾರಿಯ ಯುಗಾದಿ ರಾಜಕೀಯ ಬೇವು-ಬೆಲ್ಲಕ್ಕೆ ಸಾಕ್ಷಿಯಾಗೋ ಸಾಧ್ಯತೆ ಇದೆ. ಯುಗಾದಿ ದಿನವೇ ​​ ತನ್ನ ಸೇನಾನಿಗಳನ್ನ ರಣರಂಗಕ್ಕೆ ನಿಯೋಜಿಸಲು ಸಿದ್ಧವಾಗಿದ್ದ ಕಾಂಗ್ರೆಸ್ ದಿಢೀರ್ ಮುಂದೂಡಿದೆ.

ಅಷ್ಟಕ್ಕು ಅದಕ್ಕೆ ಕಾರಣವೇನು?

ಕರುನಾಡ ಚುನಾವಣಾ ರಣರಂಗ ಮತ್ತಷ್ಟು ರಂಗೇರುತ್ತಿದೆ. 3 ಪಕ್ಷಗಳು ಎಲೆಕ್ಷನ್‌ ರಣಕಣದಲ್ಲಿ ಮತಬೇಟೆಗೆ ಇಳಿದಿವೆ. ತಮ್ಮ ಅಭ್ಯರ್ಥಿಗಳನ್ನ ರಣಾಂಗಣಕ್ಕೆ ಇಳಿಸಲು ಸನ್ನದ್ಧವಾಗಿವೆ. ಅದರ ಭಾಗವಾಗಿ ಕಾಂಗ್ರೆಸ್ ಕೂಡ ತನ್ನ ಸೇನಾನಿಗಳನ್ನ ಯುದ್ಧಕ್ಕೆ ಇಳಿಸಲು ಸಜ್ಜಾಗಿದೆ.

ಮಾರ್ಚ್ 3ನೇ ವಾರ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಸಿಇಸಿ ಮೀಟಿಂಗ್ ರಾಜ್ಯದ ಕಾಂಗ್ರೆಸ್​​ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ಮುದ್ರೆ ಒತ್ತಿತ್ತು. ಒಟ್ಟು 185 ಕ್ಷೇತ್ರಗಳ ಬಗ್ಗೆ ಸದ್ಯಕ್ಕೆ ಚರ್ಚೆ ಆಗಿದ್ದರು 120 ರಿಂದ 130 ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿತ್ತು. ಯಾವುದೇ ಗೊಂದಲ ಆಗದಂತೆ ಸರ್ವೇ ವರದಿಗಳನ್ನ ಪರಾಮರ್ಶಿಸಿ ಕ್ಯಾಂಡಿಡೇಟ್ಸ್​ ಹೆಸರನ್ನ ಅಂತಿಮಗೊಳಿಸಲಾಗಿತ್ತು. ಹೀಗೆ ಫೈನಲ್ ಮಾಡಿರುವ ಹೆಸರನ್ನ ಯುಗಾದಿ ಸಂಭ್ರಮದ ದಿನ ಅಂದ್ರೆ ಇವತ್ತು ಘೋಷಣೆ ಮಾಡೋದಾಗಿ ಹಸ್ತ ಪಾಳಯ ಹೇಳಿಕೊಂಡಿತ್ತು. ಆದ್ರೀಗ ಹೇಳಿದಂತೆ ಇಂದು ರಿಲೀಸ್ ಆಗೋದು ಡೌಟ್.

ಅಭ್ಯರ್ಥಿಗಳ ಪಟ್ಟಿ ರಿಲೀಸ್ ಯಾವಾಗ?

ಮೊದಲ ಹಂತದಲ್ಲಿ 120ರಿಂದ 130 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡೋದಕ್ಕೆ ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದಾರೆ. ಯುಗಾದಿ ಹಬ್ಬದಂದೇ ಮೊದಲ ಪಟ್ಟಿ ರಿಲೀಸ್ ಮಾಡ್ತೀವಿ ಎಂದು ಖುದ್ದು ಸಿದ್ದರಾಮಯ್ಯ ಹೇಳಿದ್ದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟಿಕೆಟ್ ಘೋಷಣೆ ಮಾಡೋ ಬಗ್ಗೆ ಹೇಳಿದ್ದರು. ಆದ್ರೆ ಇಂದು ಕಾಂಗ್ರೆಸ್ ಮೊದಲ ಅಭ್ಯರ್ಥಿಗಳ ಪಟ್ಟಿ ಘೋಷಣೆ ಆಗೋದು ಡೌಟ್.

ಯಾಕಂದ್ರೆ ಯುಗಾದಿ ಹಬ್ಬ ಕಳೆದುಕೊಂಡೇ ನಾಳೆ ಪಟ್ಟಿ ರಿಲೀಸ್ ಮಾಡೋ ಬಗ್ಗೆ ಎಐಸಿಸಿ ನಾಯಕರು ಚಿಂತನೆ ನಡೆಸಿದ್ದಾರಂತೆ. ಇನ್ನು, ಈ ಬಗ್ಗೆ ಕಾಂಗ್ರೆಸ್​ನಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಹೀಗಾಗಿ ಇಂದು ಫಸ್ಟ್ ಲಿಸ್ಟ್ ರಿಲೀಸ್ ಆಗದಿದ್ರೆ ನಾಳೆ ಅಧಿಕೃತವಾಗಿ ಅನೌನ್ಸ್ ಆಗಲಿದೆ.

ಇಂದು ಟಿಕೆಟ್ ಘೋಷಣೆ ಆಗುತ್ತೋ? ಇಲ್ವೋ? ಆದ್ರೆ ಅಭ್ಯರ್ಥಿಗಳ ಹೆಸರು ಹೊರ ಬೀಳುವುದಂತು ಪಕ್ಕಾ. ಹೀಗಾಗಿ ಅಧಿಕೃತವಾಗಿ ಕ್ಯಾಂಡಿಡೇಟ್ಸ್​ಗಳನ್ನ ಅಖಾಡಕ್ಕಿಳಿಸಿ ಚುನಾವಣಾ ಕಹಳೆ ಮೊಳಗಿಸಲು ಕಾಂಗ್ರೆಸ್ ಪಾಳಯ ಸಜ್ಜಾಗಿದೆ. ಹೊಸ ವರ್ಷದ ಪ್ರಾರಂಭ ಎಂದೇ ಹೇಳಲಾಗುವ ಯುಗಾದಿ ನೆರಳಲ್ಲಿ ಹೊಸ ಆಟ ಶುರುಗೆ ಹಸ್ತಪಡೆ ಸಜ್ಜಾಗಿದೆ. ರಾಜಕೀಯ ಬೇವು-ಬೆಲ್ಲವನ್ನ ಎದುರುನೋಡ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗುರುವಾರದಿಂದ ಮೂರು ದಿನ ಕರ್ನಾಟಕ ಸೇರಿ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆ ಸಾಧ್ಯತೆ!

Wed Mar 22 , 2023
ನವದೆಹಲಿ, ಮಾರ್ಚ್. 22: ಕಳೆದ ವಾರದ ಏಕಾಏಕಿ ಸುರಿದ ಭಾರೀ ಮಳೆಗೆ ರಾಜ್ಯದ ಹಲವೆಡೆ ಸಾವು ನೋವುಗಳ ಜೊತೆಗೆ ರೈತರು ತಮ್ಮ ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಮೂರು ದಿನ ರಾಜ್ಯದಲ್ಲಿ ಆಲಿಕಲು ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಮಾರ್ಚ್ 23 ರಿಂದ 25 ರವರೆಗೆ ವಾಯುವ್ಯ ಭಾರತದಲ್ಲಿ ಗುಡುಗು, ಆಲಿಕಲ್ಲು ಮಳೆ ಮತ್ತು ಸಾಧಾರಣದಿಂದ ಭಾರೀ ಮಳೆ ಸಂಭವಿಸುವ ನಿರೀಕ್ಷೆಯಿದೆ ಎಂದು ಭಾರತೀಯ […]

Advertisement

Wordpress Social Share Plugin powered by Ultimatelysocial