ಜಗದೀಶ್ ಶೆಟ್ಟರ್ ಮೇಲೆ ಗೌರವವಿದೆ,!

ಶಿವಮೊಗ್ಗ, ಏಪ್ರಿಲ್ 19: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಾಹೇಬರು ದೊಡ್ಡ ಲೀಡರ್. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ಅವರು ಈಗ ಕೈಗೊಂಡಿರುವ ನಿರ್ಧಾರದ ಬಗ್ಗೆ ಜನರ ಉತ್ತರ ನೀಡುತ್ತಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.

ಬಿಜೆಪಿ ನಾಯಕ ಸದಾನಂದಗೌಡರ ಜೊತೆಗೆ ಸಮಾವೇಶವೊಂದರಲ್ಲಿ ಅವರು ಪಾಲ್ಗೊಂಡಿದ್ದರು. ಈ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪಕ್ಷವನ್ನು ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ ಜಗದೀಶ್ ಶೆಟ್ಟರ್ ಅವರ ಬಗ್ಗೆ ನನಗೆ ಗೌರವವಿದೆ. ಅವರು ದೊಡ್ಡ ಲೀಡರ್. ಇದರಲ್ಲಿ ಬೇರೆ ಮಾತೇ ಇಲ್ಲ. ಆದರೆ ಅವರು ಕೈಗೊಂಡಿರುವ ನಿರ್ಧಾರ ಬಗ್ಗೆ ಜನರೇ ಉತ್ತರ ನೀಡುತ್ತಾರೆ ಎಂದು ಶೆಟ್ಟರ್ ಪಕ್ಷಾಂತರ ನಿರ್ಧಾರ ಕುರಿತು ಪ್ರತಿಕ್ರಿಯಿಸಿದರು.

ಇತ್ತೀಚೆಗಷ್ಟೇ ಸುದ್ದಿಗೋಷ್ಠಿಯಲ್ಲಿ ಜಗದೀಶ್ ಶೆಟ್ಟರ್ ಅವರು, ಅಣ್ಣಾಮಲೈ ಅವರನ್ನು ತಮಿಳುನಾಡಿನ ಬಿಜೆಪಿಗೆ ಅಧ್ಯಕ್ಷರನ್ನಾಗಿ ಮತ್ತು ಕರ್ನಾಟಕದ ಟಿಕೆಟ್‌ ಹಂಚಿಕೆ ಪ್ರಕ್ರಿಯೆಗೆ ಅವರನ್ನು ನೇಮಿಸಲಾಗಿದೆ. ಈ ಮೂಲಕ ಒಬ್ಬ ಮಾಜಿ ಐಎಎಸ್‌ ಅಧಿಕಾರಿ ಮುಂದೆ ಮಾಜಿ ಸಿಎಂ ಆದ ನನ್ನನ್ನು ತಲೆ ತಗ್ಗಿಸಿ ನಿಲ್ಲುವಂತೆ ಮಾಡಲಾಯಿತು ಎಂದು ವಾಗ್ದಾಳಿ ನಡೆಸಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಸಿಎಂ ಯಡಿಯೂರಪ್ಪ‌ ವಿರುದ್ಧ ಅಕ್ರಮ ಡಿನೋಟಿಫಿಕೇಷನ್ ಆರೋಪ..!

Wed Apr 19 , 2023
ಮಾಜಿ ಸಿಎಂ ಯಡಿಯೂರಪ್ಪ‌ ವಿರುದ್ಧ ಅಕ್ರಮ ಡಿನೋಟಿಫಿಕೇಷನ್ ಆರೋಪ, ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರಿಂದ ದೂರು, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಟಿ.ಜೆ.ಅಬ್ರಹಾಂ. ಆರ್ಎಂವಿ ಬಡಾವಣೆಗೆ 1977ರಲ್ಲಿ ನೋಟಿಫೀಷನ್ ಮಾಡಲಾಗಿತ್ತು. ಬಿಡಿಎ ಅಧಿಕಾರಿಗಳ ವಿರೋಧದ ಮಧ್ಯೆ ಡಿನೋಫೀಕೇಷನ್, 2010ರಲ್ಲಿ 15 ಗುಂಟೆ ಅಕ್ರಮ ವಾಗಿ ಬಿಎಸ್ ಯಡಿಯೂರಪ್ಪ ಸೂಚನೆ ಮೇರೆಗೆ ಡಿನೋಟಿಫೀಷನ್ ಆರೋಪ.  ನಂತರ ಮತ್ತೊಮ್ಮೆ 25 ಗುಂಟೆ ಜಮೀನು ಡಿನೋಟಿಫಿಷನ್ ಆರೋಪ. ಉದ್ಯಮಿಗಳಿಗೆ ಜೊತೆ ಸೇರಿ ಅಕ್ರಮ ಎಸಗಿರುವ […]

Advertisement

Wordpress Social Share Plugin powered by Ultimatelysocial