ಸರ್ಕಾರದ ಆಸ್ತಿ ರಕ್ಷಿಸಿ ಸರ್ಕಾರಕ್ಕೆ ಆದಾಯ ಮಾಡಿಕೊಡಬೇಕಾದ ಮುಖ್ಯಾಧಿಕಾರಿ ಒಬ್ಬ ತಾನೆ ಅಕ್ರಮವಾಗಿ ಸರ್ಕಾರದ ಲಕ್ಷಾಂತರ ಬೆಲೆ ಬಾಳುವ ಗರಸು ಕಲ್ಲು ಮಾರಾಟ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಕೆರೂರ ಪಟ್ಟಣದಲ್ಲಿ ನೆಡೆದಿದೆ. ಅಕ್ರಮ ಮಾರಾಟ ಮಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ ಮೇಲೆ ಸಾರ್ವಜನಿಕರು ಆಕ್ರೋಶಗೊಂಡಿದ್ದು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುತ್ತಿದ್ದಾರೆ.