ಚಲಿಸುತ್ತಿದ್ದ ಟ್ರಾಕ್ಟರ್ ನಿಯಂತ್ರಣ ತಪ್ಪಿ ಪಾದಾಚಾರಿ ಮೇಲೆ ಮುಗುಚಿಬಿದ್ದು ಪಲ್ಟಿ ಹೊಡೆದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯ ದಾಸೇನಹಳ್ಳಿಯಲ್ಲಿ ನಡೆದಿದೆ. ಪಾದಾಚಾರಿ 16 ವರ್ಷದ ವಿರೇಶ್ ಎಂದು ತಿಳಿದು ಬಂದಿದ್ದು. ಸ್ಥಳದಲ್ಲೇ ಸಾವನಪ್ಪಿದ್ದಾನೆ. ಬಡವನಹಳ್ಳಿಯ ಪಿ.ಎಸ್.ಐ ಹನುಮಂತರಾಯಪ್ಪ ಭೇಟಿ ನೀಡಿದ್ದು ,ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿ,ಓರ್ವ ಸಾವು..

ಕೆಆರ್‌ಎಸ್ ಡ್ಯಾಂ ಮೇಲೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದರು ಯುವಕನೋರ್ವ ಪೊಲೀಸ್ ಜೀಪ್ ನಲ್ಲಿ ಕುಳಿತು ಜಾಲಿ ರೈಡ್ ಮಾಡಿದ್ದಾನೆ. ಅಲ್ಲದೆ ಯುವಕ ಆಟಾಟೋಪವನ್ನು ಪೊಲೀಸಪ್ಪನೇ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಡ್ಯಾಂನ ಭದ್ರತೆ ನೋಡಿಕೊಳ್ಳಬೇಕಿದ್ದ ಅಧಿಕಾರಿಯೇ ನಿಯಮ ಉಲ್ಲಂಘಿಸಿ ಸರ್ಕಾರಿ ವಾಹನದಲ್ಲಿ ಕುಳಿತು ಯುವಕ ಮೊಬೈಲ್ ಕ್ಯಾಮರಾಗೂ ಫೋಸ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ:ದಾವಣಗೆರೆ ಎಕ್ಸ್ಪ್ರೆಸ್ ಕ್ರಿಕೆಟ್ಗೆ ವಿದಾಯ  

Advertisement

Wordpress Social Share Plugin powered by Ultimatelysocial