ರಾಜ್ಯ ಸಚಿವ ಸಂಪುಟ ಸಭೆ ಆರಂಭವಾಗಿದೆ. ವಿಧಾನಸೌಧದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಂಪುಟ ಸಭೆ ನಡೆಯುತ್ತಿದೆ. ವಿಧಾನಪರಿಷತ್ ಸದಸ್ಯರ ಆಯ್ಕೆ, ಹೊರರಾಜ್ಯದವರ ಕ್ವಾರಂಟೈನ್ ವಿಚಾರ, ನೇಕಾರರ ಸಮಸ್ಯೆ ಹಾಗೂ ಶಾಲಾ ಆರಂಭ ಮತ್ತು ಶುಲ್ಕದ ವಿಚಾರಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.    

ಇಂದು ಬ್ರಾಹ್ಮಣ ಅಭಿವೃದ್ಧಿ ಸಂಘದ ನೂತನ ಕಛೇರಿಯನ್ನು ಉದ್ಘಾಟಿಸಲಾಯಿತು. ಗೃಹ ಕಛೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಾಮಾಜಿಕ ಜಾಲತಾಣಲ್ಲಿ ಉದ್ಘಾಟನೆ ಮಾಡಿದರು.ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ಎಲ್ಲಾ ಸಮುದಾಯದಲ್ಲೂ ಹಿಂದುಳಿದವರು ಹಾಗೂ ಮುಂದುವರೆದವರು ಇದ್ದಾರೆ. ಪಾರಂಪರಿಕವಾಗಿ ಬ್ರಾಹ್ಮಣ ಸಮುದಾಯವನ್ನು ಮುಂದುವರೆದ ಸಮುದಾಯವೆಂದು ಗುರಿತಿಸಲ್ಪಟ್ಟಿದೆ. ಆದರೆ ಆರ್ಥಿಕವಾಗಿ ಅಶಕ್ತವಾಗಿರುವವರು ಹಲವರು ಇದ್ದಾರೆ. ಅಂತಹವರ ಅಭ್ಯುದಯಕ್ಕಾಗಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಆರಂಭಿಸಲಾಗಿದೆ. ಶಿಕ್ಷಣ,ಪರಂಪರೆ,ಸಂಸ್ಕೃತಿ ವಿಚಾರದಲ್ಲಿ ದೇಶದ ಹಿತಿಹಾಸದಲ್ಲಿ ಬ್ರಾಹ್ಮಣ ಸಮುದಾಯದ ಕೊಡುಗೆ ಉಲ್ಲೇಖಾರ್ಹ, ಹಣ,ಆಸ್ತಿಗಿಂತ […]

Advertisement

Wordpress Social Share Plugin powered by Ultimatelysocial