ಸಹಕಾರ ಸಚಿವ ಹಾಗು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರ ಆಪ್ತರೊಬ್ಬರಿಗೆ ಕೊರೊನಾ ಸೋಂಕು ಧೃಢಪಟ್ಟ ಹಿನ್ನಲೆಯಲ್ಲಿ ಸೋಮಶೇಖರ್ ಅವರು ೭ ದಿನಗಳ ಕ್ವಾರಂಟೈನ್ ನಲ್ಲಿರಲು ನಿರ್ಧರಿಸಿದ್ದಾರೆ. ಸಚಿವರ ಆಪ್ತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಈಗ ಸಚಿವರಿಗು ಸಹ ಕೊರೊನಾ ಭೀತಿ ಎದುರಾಗಿದೆ/ ಇದರ ಜೊತೆಗೆ ಸಚಿವರ ಮನೆಯವರಿಗು ಸಹ ಮುಂಜಾಗೃತ ಕ್ರಮವಾಗಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಪ್ರಜಾಪ್ರಭುತ್ವ ಉಳಿಸಿ-ಸಂವಿಧಾನ ರಕ್ಷಿಸಿ ಹೆಸರಿನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.ನಾಳೆ ಮಧ್ಯಾಹ್ನ ರಾಜಭವನದ ಮುಂದೆ ಕಾಂಗ್ರೆಸ್ ಸಂಸದರು,ಶಾಸಕರು,ಮಾಜಿ ಶಾಸಕರು,ಮಾಜಿ ಸಂಸದರು, ಪಕ್ಷದ ಪ್ರಮುಖ ನಾಯಕರು,ಪದಾಧಿಕಾರಿಗಳು ಪ್ರತಿಭಟನೆ ನಡೆಸಲಿದ್ದಾರೆ.ಬಿಜೆಪಿ ಸರ್ಕಾರ ಕಳೆದ ಒಂದು ವರ್ಷದಲ್ಲಿ ಅತಿವೃಷ್ಟಿ,ಬರ,ಹಾಗೂ ಕೊರೋನಾವನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ.ಆದರೆ ಸರ್ಕಾರ ಸಾಧನೆ ಸಮಾವೇಶ ನಡೆಸಲು ಮುಂದಾಗಿರುವುದನ್ನು ಖಂಡಿಸಿ ,ಪ್ರಜಾಪ್ರಭುತ್ವ ಉಳಿಸಿ ಎಂಬ ಹೆಸರಿನಲ್ಲಿ ಹೋರಾಟಕ್ಕಿಳಿದಿದೆ.

Advertisement

Wordpress Social Share Plugin powered by Ultimatelysocial