ಮುಂಬೈ: ಮುಂಬೈನ ಮರೋಲ್ ಪ್ರದೇಶದ ಫ್ಲ್ಯಾಟ್ನಲ್ಲಿ 23 ವರ್ಷದ ಗಗನಸಖಿಯನ್ನು ಕತ್ತು ಸೀಳಿ ಕೊಂದಿದ್ದ ಆರೋಪಿ ವಿಕ್ರಮ್ ಅಥ್ವಾಲ್ ಅಂಧೇರಿ ಪೊಲೀಸ್ ಠಾಣೆಯ ಲಾಕಪ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಗನಸಖಿ ರೂಪಲ್ ಓಗ್ರೆಯನ್ನು ವಿಕ್ರಮ್ ಅಥ್ವಾಲ್ ಕತ್ತು ಸೀಳಿ ಕೊಂದಿದ್ದ. ಛತ್ತೀಸ್ಗಢ ಮೂಲದವರಾಗಿದ್ದ ರೂಪಲ್ ಏರ್ ಇಂಡಿಯಾದಲ್ಲಿ ತರಬೇತಿಗಾಗಿ ಏಪ್ರಿಲ್ನಲ್ಲಿ ಮುಂಬೈಗೆ ಬಂದಿದ್ದರು. ಮರೋಲ್ನ ಕ್ರಿಶನ್ಲಾಲ್ ಮರ್ವಾಹ್ ಮಾರ್ಗ್ನಲ್ಲಿರುವ ಎನ್ಜಿ ಕಾಂಪ್ಲೆಕ್ಸ್ನಲ್ಲಿರುವ ಅವರ ಫ್ಲಾಟ್ನಲ್ಲಿ ಭಾನುವಾರ ರಾತ್ರಿ ಶವ […]