ಕೊರೊನಾ ಹಾವಳಿ ಜಾಸ್ತಿಯಾಗ್ತಿರೊ ಹಿನ್ನೆಲೆಯಲ್ಲಿ ಗಂಗಾವತಿ, ಶ್ರೀರಾಮನಗರದಲ್ಲಿ ಇಂದು ಮಧ್ಯರಾತ್ರಿಯಿಂದ ಲಾಕ್ಡೌನ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅವರು ಹೇಳಿದ್ದಾರೆ.ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನ ದಿನಕ್ಕೂ ಜಾಸ್ತಿ ಆಗ್ತಿದೆ. ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಟ್ಸ್ಪಾಟ್ಗಳಾಗಿರುವ ಗಂಗಾವತಿ ಹಾಗೂ ಶ್ರೀರಾಮನಗರದಲ್ಲಿ ಲಾಕ್ಡೌನ್ ಮಾಡಲಾಗುವುದು. ಹಾಗಾಗಿ ಮುಂದಿನ 10 ದಿನದವರೆಗೆ ಲಾಕ್ ಡೌನ್ ಜಾರಿಯಾಗಲಿದೆ ಎಂದು ಸಚಿವರು ತಿಳಿದ್ದಾರೆ.