ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಗುಡಿಸಿನಲ್ಲಿದ್ದ ಕರು ಸಜೀವ ದಹನವಾಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿ ನಡೆದಿದೆ. ಆಕಸ್ಮಿಕವಾಗಿ ಗುಡಿಸಿಲಿಗೆ ಬೆಂಕಿ ಬಿದ್ದಿದ್ದು,ಬೆಂಕಿಯ ಅವಘಡದಿಂದ ದೊಡ್ಡ ಆಲಹಳ್ಳಿಯ ಗ್ರಾಮಸ್ಥ ಕಂಗಾಲಾಗಿದ್ದಾರೆ.ದೊಡ್ಡ ಆಲಹಳ್ಳಿಯ ತಾತಯ್ಯ ಎಂಬುವರಿಗೆ ಸೇರಿದ ಕರು. ಇನ್ನು ಬೆಂಕಿ ನಿಂದಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಇದನ್ನೂ ಓದಿ :ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್
#HutsBurned
ಆಕಸ್ಮಿಕ ಬೆಂಕಿಯಿಂದ ನಾಲ್ಕು ಗುಡಿಸಲುಗಳು ಸುಟ್ಟು ಭಸ್ಮವಾಗಿದ ಘಟನೆಯು ತುಮಕೂರು ಜಿಲ್ಲೆ ಶಿರಾ ತಾಲೂಕಿನ ಸೋರೇಕುಂಟೆ ಗ್ರಾಮದಲ್ಲಿ ನಡೆದಿದೆ. ಒಂದರಿಂದ ಮತ್ತೊಂದು ಗುಡಿಸಲಿಗೆ ಬೆಂಕಿ ತಗುಲಿದ್ದು,ಇದರಿಂದ ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿದುಬಂದಿದೆ. ಕೂಡಿಟ್ಟಿದ್ದ ಚಿನ್ನಾಭರಣ, ದವಸ ಧಾನ್ಯ , ದಿನಬಳಕೆ ವಸ್ತುಗಳು ಸುಟ್ಟು ಭಸ್ಮವಾಗಿದೆ. ಇದನ್ನೂ ಓದಿ :ಪೆಟ್ರೋಲ್ ಸುರಿದು ವಾಹನಗಳ ನಾಶ