ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ್ ಪಟ್ಟಣದಲ್ಲಿ ಮೆಯಲು ಹೋಗಿದ್ದ ಮೇಕೆಗೆ ವಿದ್ಯುತ್ ಪರಿವರ್ತಕದ ತಂತಿ ತಗಲಿ ಸಾವನ್ನಪ್ಪಿದೆ. ಮೇಕೆಯನ್ನು ರಕ್ಷಿಸಲು ಹೋದ ಕುರಿಗಾಹಿಗಳಿಗು ವಿದ್ಯುತ್ ತಗಲಿದ್ದು ಅದೃಷ್ಟ ವಾಷತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇನ್ನು ವಿಷಯ ತಿಳಿತಿದ್ದಾಗೆ ಸ್ಥಳಕ್ಕೆ ಆಗಮಿಸಿದ ಜೆಸ್ಕಾಮ್ ಅಧಿಕಾರಿಯಾದ ಶಿವು ಹಾಗೂ ಕಿರಿಯ ಲೈನ್ ಮ್ಯಾನ್ ಪರಿಶೀಲನೆ ನಡೆಸಿದ್ದಾರೆ. ಜೆಸ್ಕಾಮ್ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಘಟನೆ ನಡೆದಿದೆ ಎಂದು ಸ್ಥಳೀಯರು ಜೆಸ್ಕಾಮ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.