ಬೆಂಗಳೂರು ನಗರದಲ್ಲಿ ನಿನ್ನೆ ತಡರಾತ್ರಿ ಸುರಿದ ಭಾರಿ ಮಳೆಯಿಂದ ಕೆಂಗೇರಿ ಮೋರಿ ತಡೆಗೋಡೆ ಕುಸಿದು ರಸ್ತೆಯೆಲ್ಲಾ ನದಿಯಂತಾಗಿದೆ. ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಕೆಂಗೇರಿ ಬಳಿ ಚಾಲಕರು ಅಸ್ತವ್ಯಸ್ತಗೊಂಡು ಟ್ರಾಫಿಕ್ ಜಾಮ್ ಉಂಟಾಗಿದೆ. ನಿನ್ನೆ ತಡರಾತ್ರಿ ಸುರಿದ ಮಳೆಗೆ ವೃಷಭಾವತಿ ನದಿ ಉಕ್ಕಿ ಹರಿದಿತ್ತು. ಕೆಂಗೇರಿಯ ದುಬಾಸಿಪಾಳ್ಯ ಬಳಿ ನದಿಯ ಹರಿವಿನ ರಭಸಕ್ಕೆ ತಡೆಗೋಡೆ ಕೊಚ್ಚಿಹೋಗಿದೆ. ತಡೆಗೋಡೆ ಕೊಚ್ಚಿಹೋದ ಪರಿಣಾಮ ಮೈಸೂರು ರಸ್ತೆಗೆ ನೀರು ಹರಿದಿದ್ದು, ರಸ್ತೆಯ ಒಂದು ಭಾಗ ಕುಸಿತವಾಗಿದೆ. […]